ಪುನೀತ್ ನಮನ ಕಾರ್ಯಕ್ರಮ ದಿನ ಚಿತ್ರೋದ್ಯಮ ಬಂದ್

ಶನಿವಾರ, 13 ನವೆಂಬರ್ 2021 (09:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಆಯೋಜಿಸಲಾಗಿರುವ ಪುನೀತ್ ನಮನ ಕಾರ್ಯಕ್ರಮದ ಬಗ್ಗೆ ವಾಣಿಜ್ಯ ಮಂಡಳಿ ಮಾಹಿತಿ ನೀಡಿದೆ.

ನವಂಬರ್ 17 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟದವರೂ ಇರುತ್ತಾರೆ. ಡಾ.ರಾಜ್ ಕುಟುಂಬ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಇನ್ನು, ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಆಯೋಜನೆಯಾಗಿದ್ದು, ಆ ದಿನ ಚಿತ್ರೋದ್ಯಮದವರು ಭಾಗವಹಿಸಬೇಕಾಗಿರುವುದರಿಂದ ಎಲ್ಲಾ ರೀತಿಯ ಸಿನಿ ಚಟುವಟಿಕೆಗಳು ಬಂದ್ ಆಗಿರಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸಾ.ರಾ. ಗೋವಿಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ