ಐ ಲವ್ ಯೂ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ಹಲ್ಲೆ!

ಭಾನುವಾರ, 18 ಜುಲೈ 2021 (15:58 IST)
ಶನಿವಾರ ರಾತ್ರಿ 2.30ರ ಸುಮಾರಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಸಂಗೀತ ನಿರ್ದೇಶಕ ಡಾ. ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ.
ರಾಜರಾಜೇಶ್ವರಿ ನಗರದ ಗೆಳೆಯರ ಮನೆಯಲ್ಲಿ ಉಸಿರು ತಂಡದ ವತಿಯಿಂದ ಸಂಚಾರಿ ವಿಜಯ್ ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ಮರಳುತ್ತಿದ್ದಾಗ ಕಿರಣ್ ಅವರ ಮೇಲೆ ದಾಳಿ ನಡೆದಿದೆ.
ಕಿರಣ್ ಅವರನ್ನು ಫಾಲೋ‌ ಮಾಡಿಕೊಂಡು ಬಂದ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಡಾ. ಕಿರಣ್ ರ ತಲೆಯ ಹಿಂದೆ ಸಣ್ಣ ಗಾಯ ಆಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ