ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ..?

ಸೋಮವಾರ, 18 ಸೆಪ್ಟಂಬರ್ 2017 (15:30 IST)
ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಮುಂಬೈನಲ್ಲಿ ಬಂಧನಕ್ಕೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಠೇವಣಿದಾರರಿಗೆ ಹಣ ಹಿಂದಿರುಗಿಸುವುದಾಗಿ ಹೇಳಿ ಆನಂದ್ ಅಪ್ಪುಗೋಳ್ ತಲೆಮರೆಸಿಕೊಂಡಿದ್ದರು ಎಂಬ ಆರೋಪವಿತ್ತು.  

ಠೇವಣಿದಾರರಿಗೆ ಬಡ್ಡಿಯ ಆಮಿಷ ತೋರಿಸಿ ಠೇವಣಿ ಇರಿಸಿಕೊಂಡಿದ್ದ ಆನಂದ್ ಅಪ್ಪುಗೋಳ, 300 ಕೋಟಿ ರೂ. ವಂಚಿಸಿರುವ ಆರೋಪವಿದೆ. ಇದೀಗ, ಆನಂದ್ ಅಪ್ಪುಗೋಳ್ ನಡೆಸುತ್ತಿದ್ದ ಕ್ರಾತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿಯಾಗಿದ್ದು, ಠೇವಣಿದಾರರಿಗೆ ಹಣ ಹಿಂದಿರುಗಿಸಿಲ್ಲ. ಇದೀಗ, ನಂಬಿಕೆ ದ್ರೋಹ, ವಂಚನೆ ಆರೋಪದಡಿ ಬಂಧಿಸಿರುವುದಾಗಿ ತಿಳಿದು ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರವನ್ನ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದರು. ನಿರ್ಮಿಸಿದ್ದು ಒಂದೇ ಚಿತ್ರವಾದರೂ ಅದ್ದೂರಿತನಕ್ಕೇನೂ ಕೊರತೆ ಇರಲಿಲ್ಲ. ಚಿತ್ರ ಕೂಡ ಯಶಸ್ಸು ಕಂಡು ಒಳ್ಳೆಯ ಕಲೆಕ್ಷನ್ ಮಾಡಿತ್ತು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ