ಚಿರಂಜೀವಿ ಸರ್ಜ ಮತ್ತು ಮೇಘನಾ ರಾಜ್ ಅವರು ಪ್ರಣಯ ಜೋಡಿಯಾಗಿದ್ದಾರೆ ಎನ್ನುವ ಸುದ್ದಿ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ದಕ್ಷಿಣದ ಬೇರೆ ವುಡ್ ಗಳಲ್ಲೂ ಹರಡಿದೆ. ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಚಿರಂಜೀವಿ ಸರ್ಜಾ. ಅಲ್ಲದೆ ಈಗ ರುದ್ರತಾಂಡವ, ಸೀಜರ್ನಲ್ಲಿ ಅಭಿನಯಿಸಲು ಸಿದ್ಧತೆ ನಡೆದಿದೆ. ಈ ಮಧ್ಯೆ ತಾರ ದಂಪತಿಗಳಾದ ಪ್ರಮೀಳ ಜೋಷಾಯ್ ಮತ್ತು ಸುಂದರ್ ರಾಜ್ ದಂಪತಿಗಳ ಮಗಳಾದ ಮೇಘನಾ ಅವರಿಗೆ ಪ್ರೀತಿ ಉಂಟಾಗಿ ಈಗ ಮದುವೆ ತನಕ ಬಂದು ನಿಂತಿದೆ ಈ ಕಥನ.
ಮೇಘನ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಆ ಬಳಿಕ ರಾಜ ಹುಲಿ ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದು ನೆಲೆಸಿದ ನಟಿ. ಆಕೆಯ ಅಭಿನಯದಿಂದ ಕನ್ನಡದಲ್ಲಿ ಅನೇಕ ಅವಕಾಶಗಳು ಹುಡುಕಿಕೊಂಡು ಬಂತು.
ಕಳೆದ ವರ್ಷ ಕ್ರಿಸ್ ಮಸ್ ಸಮಯದಲ್ಲಿ ಮೇಘನ ಮನೆಗೆ ಹೋಗಿದ್ದ ಚಿರು ಅವರು ಮೊಟ್ಟಮೊದಲ ಬಾರಿ ಮಾಧ್ಯಮಗಳ ಸುದ್ದಿಗೆ ಆಹಾರವಾದರು. ಆದರೆ ಈ ಸಂಗತಿ ಅಲ್ಲಗಳೆದಿದ್ದ ಈ ಜೋಡಿ ಈಗ ಮದುವೆ ಮಾಡಿಕೊಳ್ಳುವಷ್ಟು ಪ್ರೀತಿ ಮಾಡಿದ್ದಾರೆ. ಪ್ರಸ್ತುತ ಪಾಂಡಿಯನಾಡು ರೀಮೇಕ್ನಲ್ಲಿ ನಟಿಸುತ್ತಿರುವ ಚಿರಂಜೀವಿಯು ಮೇಘನಾರನ್ನು ಒಂದು ಶೂಟಿಂಗ್ ನಲ್ಲಿ ಕಂಡರಂತೆ. ಆಗ ಪರಿಚಯ ಪ್ರೇಮಕ್ಕೆ ತಿರುಗಿ ಈಗ ಹಸೆಮಣೆಗೇರುತ್ತಿದ್ದಾರೆ. ಈಗ ತಮಿಳಿನಲ್ಲಿ ಅವಕಾಶಗಳು ಇಲ್ಲದೆ ಹೋದರು ಮೇಘನ ಅವರನ್ನು ಕನ್ನಡ ಹಾಗೂ ಮಲೆಯಾಳಂ ಭಾಷೆಗಳು ಕೈ ಹಿಡಿದಿವೆ.