ಈ ಚಿತ್ರದಲ್ಲಿ ಸುಕೃತಾಗೆ ಖಂಡಿತ ರಾಜ್ಯ ಚಲನ ಚಿತ್ರ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎನ್ನುವ ಭವಿಷ್ಯ ನುಡಿದಿದ್ದಾರೆ ಸುಮನ್ ಕಿತ್ತೂರ್. ಈ ಚಿತ್ರವನ್ನು ಮೇ ತಿಂಗಳಿಂದ ಆರಂಭಿಸುತ್ತಾರಂತೆ. ಇದಾದ ಬಳಿಕ ಸುಮನ್ ಕಿತ್ತೂರ್ ಕೃಷ್ಣೆ ಗೌಡನ ಆನೆ ಯನ್ನು ಹಿರಿತೆರೆಗೆ ತರಲಿದ್ದಾರೆ. ಈಗಾಗಲೇ ಈ ಬಗ್ಗೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರು ಸಮ್ಮತಿ ಮುದ್ರೆ ನೀಡಿದ್ದಾರಂತೆ.
ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಈಗ ಕಿರಗೂರಿನ ಗಯ್ಯಾಳಿಗಳು ತೆರೆ ಕಾಣಲು ಸಿದ್ಧತೆ ನಡೆಸಿದ್ದಾಳೆ. ಈ ಚಿತ್ರಕ್ಕೆ ಲುಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.