ಈಗ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನದ ಚಿತ್ರ ಕಿಲ್ಲಿಂಗ್ ವೀರಪ್ಪನ್ ಹವಾ ಸಾಗಿದೆ. ಡಾ. ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ ಈ ಚಿತ್ರದಲ್ಲಿ. ವೀರಪ್ಪನ್ ಅವರು ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು 108ದಿನಗಳ ಕಾಲ ಬಂಧಿಸಿ ಬಿಡುಗಡೆ ಮಾಡಿದ್ದು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಈಗ ನಾವು ಹೇಳ ಹೊರಟಿರುವುದು ಆ ಚಿತ್ರದ ಕಥೆಯಲ್ಲ. ಬದಲಿಗೆ ಅದೇ ರೀತಿಯ ಕಥೆಯನ್ನು ಹೊಂದಿರುವ ಮತ್ತೆ ಬಂದ ವೀರಪ್ಪನ್ ಸಿನಿಮಾ ಬಗ್ಗೆ. ಓಂಕಾರ್ ಅಲಿಯಾಸ್ ಪುರುಷೋತ್ತಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ನಟಿಸುತ್ತಿದ್ದಾರೆ.