ವಜ್ರಕಾಯದಲ್ಲಿ ನಾಯಕ ನಟ ಶರಣ್ ಗಾನ ಸುಧೆ...?!

ಗುರುವಾರ, 5 ಮಾರ್ಚ್ 2015 (10:02 IST)
ಮಧ್ಯಾನ್ಹದ ಕನಸಲ್ಲಿ ಎಂದು ರಾಜರಾಜೇಂದ್ರ ಚಿತದಲ್ಲಿ ನಟ ಶರಣ್ ಹಾಡಿದ್ದರು. ನೂರನೇ ಚಿತ್ರದ ಮೂಲಕ ನಾಯಕರಾದ ಕಾಮಿಡಿ ನಟ ಈಗ ಕಾಮಿಡಿ ನಾಯಕರಾಗಿ ಕನ್ನಡ ಚಿತ್ರಪ್ರೇಮಿಗಳನ್ನು ಆಕರ್ಷಿಸುತ್ತಿದ್ದಾರೆ. ಮಂಜುಳಾ ಗುರುರಾಜ್ ಅವರ ಜೊತೆ ಹಾಡಿದ್ದ ಶರಣ್ ಅವರ ಈ ಹಾಡು ಟೀವಿ ಹಾಗೂ ಎಫ್ ಎಂ ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ಸುಳ್ಳಲ್ಲ. ಅಲ್ಲದೆ ಈಗ ಸಹಿತ ಆ ಹಾಡಿಗೆ ಅತಿ ಹೆಚ್ಚಿನ ಬೇಡಿಕೆ ಇದೆ.
ಶರಣ್ ಧ್ವನಿ ಈಗ ಹಣ ಮಾಡುವ ಸಾಧನವಾಗಿ ಬದಲಾಗಿದೆ ಸಿನಿಮಾ ಮಂದಿಗೆ. ಕೊರಿಯಾಗ್ರಾಫರ್-ನಿರ್ದೇಶಕ ಹರ್ಷ ಅವರು ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರ ವಜ್ರಕಾಯದಲ್ಲಿ ಶರಣ್ ಅವರ ಕೈಲಿ ಹಾಡಿಸುತ್ತಿದ್ದಾರೆ. ಈಗಾಗಲೇ ಅನೇಕ ಹೊಸತನಗಳನ್ನು ಹೊಂದಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತ ಮೇರು ನಟರು ಬಂದು ಶಿವಣ್ಣನ ಜೊತೆ ಡ್ಯಾನ್ಸ್ ಮಾಡಿ ಆಗಿದೆ. ಅದಾದ ಬಳಿಕ ತಮಿಳು ಸ್ಟಾರ್ ಹೀರೋ ಧನುಷ್ ಅವರು ಸಹ ಹಾಡಿದ್ದಾರೆ, ಈಗ ಶರಣ್ ಈ ಚಿತ್ರದಲ್ಲಿ ಹಾಡುತ್ತಿದ್ದಾರೆ. ಇದನ್ನು ಡಾ. ಮನೋಹರ್ ಅವರು ನಿರ್ಮಾಣ  ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದಲ್ಲಿ ಮಾರ್ಚ್ 8 ರಂದು ಶರಣ್ ಹಾಡಲಿದ್ದಾರೆ. ಈ ಚಿತ್ರದ ಹಾಡುಗಳು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆ ಆಗಲಿದೆ. 

ವೆಬ್ದುನಿಯಾವನ್ನು ಓದಿ