ಬಂಗಾರಪ್ಪ ಮನೆ ಒಂದು ಮಾಡಲು ನಾನು ಅವರ ಮನೆ ಮಗ ಅಲ್ಲ: ಶಿವರಾಜ್ ಕುಮಾರ್

Krishnaveni K

ಮಂಗಳವಾರ, 12 ಮಾರ್ಚ್ 2024 (13:40 IST)
ಬೆಳಗಾವಿ: ಒಡೆದ ಮನೆಯಂತಾಗಿರುವ ಬಂಗಾರಪ್ಪ ಮನೆ ಒಂದು ಮಾಡಲು ಪ್ರಯತ್ನ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ, ಅಳಿಯ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಶಿವಣ್ಣ ಪತ್ನಿ ಗೀತಾ ಬಂಗಾರಪ್ಪನವರ ಮಗಳು. ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಂಗಾರಪ್ಪ ಪುತ್ರರಾದ ಸಚಿವ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವೆ ವೈಮನಸ್ಯವಿದೆ. ಹೀಗಾಗಿ ಬಂಗಾರಪ್ಪ ಮನೆ ಒಡೆದ ಮನೆಯಂತಾಗಿದೆ.

ಇದೀಗ ಬಂಗಾರಪ್ಪ ಮನೆ ಒಂದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಶಿವರಾಜ್ ಕುಮಾರ್ ‘ಬಂಗಾರಪ್ಪ ಮನೆ ಒಂದು ಮಾಡಲು ನಾನು ಅವರ ಮನೆ ಅಳಿಯ, ಮಗನಲ್ಲ’ ಎಂದಿದ್ದಾರೆ. ಆ ಮೂಲಕ ಬಂಗಾರಪ್ಪ ಮನೆ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದಿದ್ದಾರೆ.

ಆದರೆ ಪತ್ನಿ ಗೀತಾರನ್ನು ಸಂಸದೆಯಾಗಿ ನೋಡುವ ಆಸೆಯಿದೆ. ಅವರನ್ನು ಗೆಲ್ಲಿಸಲು ಏನು ಮಾಡಬೇಕೋ ಎಲ್ಲಾ ಮಾಡುತ್ತೇವೆ. ಗೀತಾ ಪರವಾಗಿ ಪ್ರಚಾರ ಮಾಡಲೂ ಸಿದ್ಧ ಎಂದಿದ್ದಾರೆ. ಕರಟಕ ದಮನಕ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್ ಕುಮಾರ್ ಇಂದು ಬೆಳಗಾವಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಮಾಧ‍್ಯಮಗಳಿಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ