ವಿ. ಶ್ರೀಧರ್ ಸಂಗೀತ ಹೊಂದಿದೆ.ಕೆ ಎಸ್ ಚಂದ್ರ ಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಗಣೇಶ್ ಅವರ ಸಾಹಸ ನಿರ್ದೇಶನ ಹೊಂದಿರುವ ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ಕೃತಿ ಕರಬಂಧ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ ಪ್ರಸಾದ್, ಆದಿ ಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧ, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಹರೀಶ್ ರೈ ಮುಂತಾದವರು ನಟಿಸಿದ್ದಾರೆ.
ಈ ಮೊದಲು ನಾವು ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಹುಚ್ಚನ ಪಾತ್ರದಲ್ಲಿ ಕಂಡು ಬರುತ್ತಿದ್ದಾರೆ ಎಂದು ಹೇಳಿದ್ದೆವು. ಇದರ ಹೀರೋಯಿನ್ ಕೃತಿ ಬೆಳ್ಳಿ ಮೂಲಕ ಮೊದಲ ಬಾರಿಗೆ ಶಿವಣ್ಣ ಜೊತೆ ನಟಿಸುತ್ತಿದ್ದಾಳೆ. ಇದುವರೆಗೂ ನಟಿಸಿರುವ ಪಾತ್ರಗಳಿಗಿಂತ ತುಂಬಾ ಬಿನ್ನವಾಗಿದೆ ಎಂದು ಹೇಳಿದ್ದಾರೆ ಕೃತಿ. ಈವರೆಗೂ ಕಾಲೇಜ್ ಹುಡುಗಿಯಾಗಿ ಎಲ್ಲರ ಮುಂದೆ ಬರುತ್ತಿದ್ದೆ, ಆದರೆ ಈ ಚಿತ್ರದಲ್ಲಿ ಭಿನ್ನ ಪತ್ರ ಸಿಕ್ಕಿದೆ ಎಂದು ಹೇಳಿರುವ ಈ ತಾರೆ ಆ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿನಿಮಾದ ಸ್ಕ್ರಿಪ್ಟ್ ಓದಿದಾಗ ತಾನು ಇದರಲ್ಲಿ ನಟಿಸಲೇ ಬೇಕು ಎಂದೆನಿಸಿತಂತೆ ಆಕೆಗೆ. ತನ್ನ ತಾರಾ ಬದುಕಿಗೆ ಇದು ತಿರುವನ್ನು ನೀಡುತ್ತದೆ ಎಂದು ಅನ್ನಿಸಿತಂತೆ.