ಬೆಳ್ಳಿಯಲ್ಲಿ ಮಚ್ಚು ಹಿಡಿದು ಹುಚ್ಚರಾದ ಶಿವಣ್ಣ

ಗುರುವಾರ, 30 ಅಕ್ಟೋಬರ್ 2014 (10:02 IST)
ಸೆಂಚುರಿ ಸ್ಟಾರ್  ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಹೊಚ್ಚ ಹೊಸ ಚಿತ್ರ ಬೆಳ್ಳಿ. ಇದರಲ್ಲಿ ಅವರು ಹುಚ್ಚನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ನಿರ್ದೇಶಕ ಮಹೇಶ್ ಹೇಳಿದಾಗ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಶಿವಣ್ಣ ಮೊಟ್ಟ ಮೊದಲ ಬಾರಿಗೆ ಆ ರೀತಿಯ ಪಾತ್ರ ಮಾಡುತ್ತಿದ್ದಾರೆ. ಮಹೇಶ್ ಅವರು ನೈಜ ಬದುಕಲ್ಲಿ ಕಂಡ ಪುಡಿ ರೌಡಿ ಒಬ್ಬನ ಕಥೆ ಇದಾಗಿದ್ದು, ಆತ ಹುಚ್ಚನಾಗಿದ್ದಾಗ ಇಂತಹ ಒಂದು ಪಾತ್ರವನ್ನು ಸೃಷ್ಟಿ ಮಾಡಿ ಅದನ್ನು ಶಿವಣ್ಣ ಬಳಿ ಹೇಳಿದರಂತೆ. 

ಆ ಕಥೆ ಕೇಳಿದಾಗ ಶಿವಣ್ಣನಿಗೆ ಸಕತ್ ಇಷ್ಟ ಆಯ್ತಂತೆ. ಮುಖ್ಯವಾಗಿ ಇಲ್ಲಿ ರೌಡಿಸಂನಿಂದ ಹುಚ್ಚನಾಗುವುದಿಲ್ಲ ಹೀರೋ. ಬದಲಿಗೆ ಆತ ಪ್ರೀತಿಯ ಕಾರಣದಿಂದ ಹುಚ್ಚನಾಗುತ್ತಾನಂತೆ. ಸಾಮಾನ್ಯವಾಗಿ ಚಿತ್ರದಲ್ಲಿ ಹುಚ್ಚನ ಪಾತ್ರಧಾರಿ ಆಗಿರುವ ಕಲಾವಿದರು ಯಶಸ್ವಿ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. 
 
ಈವರೆಗೂ ತಾನು ಈ ರೀತಿಯ ಪಾತ್ರ ಮಾಡೇ ಇರಲಿಲ್ಲ. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ ಎಂದು ಹೇಳಿರುವ ಶಿವಣ್ಣ ಬೆಳ್ಳಿ ಚಿತ್ರದ ಒನ್ ಲೈನ್ ಸ್ಟೋರಿ ಹೇಳಿದ್ದಾರೆ ತಮ್ಮ ಅಭಿನಯದ ಬಗ್ಗೆ. ಈ ಚಿತ್ರ ನಾಳೆ ಬಿಡುಗಡೆ ಆಗಲಿದೆ. ಕೃತಿ ಕರಬಂಧ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಜನರು ತಮ್ಮ ಪಾತ್ರವನ್ನು ಯಾವರೀತಿ  ಸ್ವೀಕರಿಸುತ್ತಾರೋ ಎನ್ನುವ ಕುತೂಹಲ ಹೊಂದಿದ್ದಾರೆ ಶಿವಣ್ಣ. ನಿರ್ದೇಶಕರ ನಟ ಎನ್ನುವ ಅಗ್ಗಳಿಕೆ ಪಡೆದಿರುವ ಶಿವರಾಜ್ ಕುಮಾರ್ ಅವರ ಈ ಸಾಹಸವು ಯಶ ಪಡೆಯಲಿ  ಎನ್ನುವ ಹಾರೈಕೆ ವೆಬ್ ದುನಿಯಾದ್ದಾಗಿದೆ. 

ವೆಬ್ದುನಿಯಾವನ್ನು ಓದಿ