ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಹೊಚ್ಚ ಹೊಸ ಚಿತ್ರ ಬೆಳ್ಳಿ. ಇದರಲ್ಲಿ ಅವರು ಹುಚ್ಚನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ನಿರ್ದೇಶಕ ಮಹೇಶ್ ಹೇಳಿದಾಗ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಶಿವಣ್ಣ ಮೊಟ್ಟ ಮೊದಲ ಬಾರಿಗೆ ಆ ರೀತಿಯ ಪಾತ್ರ ಮಾಡುತ್ತಿದ್ದಾರೆ. ಮಹೇಶ್ ಅವರು ನೈಜ ಬದುಕಲ್ಲಿ ಕಂಡ ಪುಡಿ ರೌಡಿ ಒಬ್ಬನ ಕಥೆ ಇದಾಗಿದ್ದು, ಆತ ಹುಚ್ಚನಾಗಿದ್ದಾಗ ಇಂತಹ ಒಂದು ಪಾತ್ರವನ್ನು ಸೃಷ್ಟಿ ಮಾಡಿ ಅದನ್ನು ಶಿವಣ್ಣ ಬಳಿ ಹೇಳಿದರಂತೆ.
ಈವರೆಗೂ ತಾನು ಈ ರೀತಿಯ ಪಾತ್ರ ಮಾಡೇ ಇರಲಿಲ್ಲ. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ ಎಂದು ಹೇಳಿರುವ ಶಿವಣ್ಣ ಬೆಳ್ಳಿ ಚಿತ್ರದ ಒನ್ ಲೈನ್ ಸ್ಟೋರಿ ಹೇಳಿದ್ದಾರೆ ತಮ್ಮ ಅಭಿನಯದ ಬಗ್ಗೆ. ಈ ಚಿತ್ರ ನಾಳೆ ಬಿಡುಗಡೆ ಆಗಲಿದೆ. ಕೃತಿ ಕರಬಂಧ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಜನರು ತಮ್ಮ ಪಾತ್ರವನ್ನು ಯಾವರೀತಿ ಸ್ವೀಕರಿಸುತ್ತಾರೋ ಎನ್ನುವ ಕುತೂಹಲ ಹೊಂದಿದ್ದಾರೆ ಶಿವಣ್ಣ. ನಿರ್ದೇಶಕರ ನಟ ಎನ್ನುವ ಅಗ್ಗಳಿಕೆ ಪಡೆದಿರುವ ಶಿವರಾಜ್ ಕುಮಾರ್ ಅವರ ಈ ಸಾಹಸವು ಯಶ ಪಡೆಯಲಿ ಎನ್ನುವ ಹಾರೈಕೆ ವೆಬ್ ದುನಿಯಾದ್ದಾಗಿದೆ.