ಶಕ್ತಿಧಾಮದ ಮಕ್ಕಳಿಗೆ ಪುನೀತ್, ಡಾ.ರಾಜ್ ಸಮಾಧಿ ದರ್ಶನ ಮಾಡಿಸಿದ ಶಿವಣ್ಣ ದಂಪತಿ

ಬುಧವಾರ, 2 ಫೆಬ್ರವರಿ 2022 (15:56 IST)
ಬೆಂಗಳೂರು: ಮೈಸೂರಿನ ಶಕ್ತಿಧಾಮದ ಮಕ್ಕಳನ್ನು ಇಂದು ಬೆಂಗಳೂರಿಗೆ ಕರೆತಂದ ಶಿವಣ್ಣ ದಂಪತಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಮಾಧಿ ದರ್ಶನ ಮಾಡಿಸಿದ್ದಾರೆ.

ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಸ್ವತಃ ತಾವೇ ಮಕ್ಕಳನ್ನು ಸರತಿ ಸಾಲಲ್ಲಿ ಕರೆದುಕೊಂಡು ಬಂದು ಮೂವರು ದಿಗ್ಗಜರ ಸಮಾಧಿ ದರ್ಶನ ಮಾಡಿಸಿದ್ದಾರೆ.

ಶಕ್ತಿಧಾಮ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕನಸಿನ ಕೂಸು. ಮೊನ್ನೆಯಿಂದ ಶಿವರಾಜ್ ಕುಮಾರ್ ಹಾಗೂ ಪತ್ನಿ ಶಕ್ತಿಧಾಮದ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ನಿಮಿತ್ತ ಹೋಗಿದ್ದ ಶಿವಣ್ಣ ಮಕ್ಕಳೊಂದಿಗೆ ಅಮೂಲ್ಯ ಕ್ಷಣ ಕಳೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ