ಯುವರತ್ನದಲ್ಲಿ ಪುನೀತ್ ಜತೆಗೆ ಶಿವಣ್ಣ! ಸಂತೋಷ್ ಆನಂದ್ ರಾಮ್ ಕೊಟ್ಟ ಶಾಕ್!

ಸೋಮವಾರ, 13 ಜುಲೈ 2020 (10:45 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಯುವರತ್ನ’ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾದಿರುವ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭರ್ಜರಿ ಶಾಕ್ ಕೊಟ್ಟಿದ್ದಾರೆ.


ನಿನ್ನೆ ಶಿವಣ್ಣ ಬರ್ತ್ ಡೇ ಇತ್ತು. ಹೀಗಾಗಿ ಹ್ಯಾಟ್ರಿಕ್ ಹೀರೋಗೆ ಶುಭಾಷಯ ಕೋರುವುದರ ಜತೆಗೆ ಸಂತೋಷ್ ಅಭಿಮಾನಿಗಳಿಗೆ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

ಯುವರತ್ನ ಡಬ್ಬಿಂಗ್ ದೃಶ್ಯವೊಂದರ ವಿಡಿಯೋವನ್ನು ಪ್ರಕಟಿಸಿದ ಸಂತೋಷ್ ಆನಂದ್ ರಾಮ್ ಪವರ್ ಸ್ಟಾರ್ ಜತೆಗೆ ಶಿವಣ್ಣ, ಈ ದೃಶ್ಯಕ್ಕಾಗಿ ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ. ಆ ಡಬ್ಬಿಂಗ್ ಮಾಡುತ್ತಿರುವ ದೃಶ್ಯದಲ್ಲಿ ಪುನೀತ್ ಶಿವಣ್ಣರ ‘ಓಂ’ ಸಿನಿಮಾದ ಮಾಸ್ ಡೈಲಾಗ್ ಒಂದನ್ನು ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಖದರ್ ಯಾವ ರೀತಿ ಇರಲಿದೆ ಎಂಬುದನ್ನು ನೋಡಲು ಜನರೂ ಕುತೂಹಲದಿಂದ ಕಾದು ಕುಳಿತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ