ಅಭಿಮಾನಿಗೆ ಧೈರ್ಯ ತುಂಬಿದ ನಟ ಶಿವರಾಜಕುಮಾರ್

ಶನಿವಾರ, 13 ಜನವರಿ 2018 (20:51 IST)
ಬಸ್‌ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಅಭಿಮಾನಿಯನ್ನು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.
 
ಮೈಸೂರಿನ ಸರಸ್ವತಿ ಪುರಂನಲ್ಲಿರುವ ಉಲ್ಲೇಖ್‌ನ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ ಕುಮಾರ್ ಅಭಿಮಾನಿಗೆ ಧೈರ್ಯ ತುಂಬಿದ್ದಾರೆ.
 
ಬಸ್‌ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಉಲ್ಲೇಖ್‌ ಆಸ್ಪತ್ರೆ ಚಿಕಿತ್ಸೆ ಸಂದರ್ಭದಲ್ಲಿ ನೆಚ್ಚಿನ ನಟ ಶಿವರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಳ್ಳುತ್ತಿದ್ದ. ಅಭಿಮಾನಿಯ ಬಗ್ಗೆ ತಿಳಿದ ನಟ ಶಿವರಾಜ ಕುಮಾರ್ ಉಲ್ಲೇಖ್‌ ಮನೆಗೆ ಭೇಟಿ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ