ಇನ್ನು ಶಿವಣ್ಣ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಅಭಿಮಾನಿಗಳು ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಇನ್ನು ಸಿನಿಮಾ ರಂಗದ ಅನೇಕರು ಕೂಡ ಶಿವಣ್ಣರನ್ನು ನೋಡದಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು, ರಕ್ಷಿತಾ, ಪ್ರೇಮ್, ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕುಮಾರ್ ಸೇರಿದಂತೆ ಹಲವು ಆಗಮಿಸಿದ್ದರು. ಆದ್ರೆ ಸಂಜೆ 4 ಗಂಟೆ ಶಿವರಾಜ್ ಕುಮಾರ್ ಅವರನ್ನು ವಾರ್ಡ್ ಗೆ ಶಿಪ್ಟ್ ಮಾಡಲಾಯತ್. ವೈದ್ಯರು ಆತಂಕ ಪಡೋ ಅಗತ್ಯ ಇಲ್ಲ ಎಂದು ತಿಳಿಸಿದ್ರು. ಬಳಿಕ ಸ್ವತಃ ಶಿವಣ್ಣ ಅವರೇ ಆಸ್ಪತ್ರೆಯ ಕಿಟಿಕಿಯ ಬಳಿ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದ್ರು. ಆತಂಕ ಪಡೋ ಅಗತ್ಯವಿಲ್ಲ ನಾನು ಆರಾಮಾಗಿದ್ದೇನೆ ಎಂದರು.