ತಮನ್ನಾಗೆ ಬೆಲೆ ಇಲ್ಲದಂತೆ ಮಾಡಿದ ನಟಿ ಶ್ರೀದೇವಿ..?!

ಮಂಗಳವಾರ, 23 ಡಿಸೆಂಬರ್ 2014 (11:05 IST)
ರಾಜಮೌಳಿ  ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ. ಆ ಚಿತ್ರದಲ್ಲಿ ಅನುಷ್ಕ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆ ಚಿತ್ರದಲ್ಲಿ ನಟಿಸಲೆಂದು ಹಿರಿಯ ನಟಿ  ಶ್ರೀದೇವಿ ಅವರನ್ನು ಈ ಚಿತ್ರದಲ್ಲಿ ಅಭಿನಯಿಸಲು ಆಹ್ವಾನ ನೀಡಲಾಗಿತ್ತು. ಆದರೆ ಆಕೆ ಅಸಮ್ಮತಿ ತೋರಿದ್ದರು. ಈಗ ಮತ್ತೆ ಶ್ರೀದೇವಿ ಅವರ ಬಗ್ಗೆ  ಮಾತುಗಳನ್ನು ಆಡುತ್ತಿದ್ದಾರೆ ಮಾಧ್ಯಮಿಗಳು. ಅದಕ್ಕೆ ಕಾರಣ ತಮನ್ನಳ ಹೊಸ ರೂಪ. ಆಕೆಯನ್ನು ರಾಜಮೌಳಿಗಾರು ಶ್ರೀದೇವಿ ಮತ್ತು ಚಿರಂಜೀವ ಅವರು ಅಭಿನಯಿಸಿದ್ದ ಜಗದೇಕ ವೀರುಡು ಅತಿಲೋಕ ಸುಂದರಿ ಎನ್ನುವ ಚಿತ್ರದಲ್ಲಿ ಶ್ರೀ ಇದ್ದಂತೆ ಈಗ ತಮ್ಮುವನ್ನು ಸಿದ್ಧ ಮಾಡಿದ್ದಾರೆ. 
ಆಕೆಯ  ಫಸ್ಟ್   ಲುಕ್ ನಿಂದ ಆ ಸಂಗತಿ ಕಂಡು ಬಂದಿದೆ. ಆ ಬಗ್ಗೆ ಈಗ ಟಾಲಿವುಡ್ ನಲ್ಲಿ ಚರ್ಚೆ ಆರಂಭವಾಗಿದೆ. ರಾಜಮೌಳಿ ಅವರ ಮಾಡಿದ ಆಣೆ ಪ್ರಮಾಣದಂತೆ ತಮನ್ನ ಆರು ಕೆಜಿಗಳಷ್ಟು ತೂಕ ಕಡಿಮೆ ಮಾಡಿಕೊಂಡಿದ್ದಾಳೆ. ಅಲ್ಲದೆ ಪಾತ್ರಕ್ಕೆ ಪೂರಕವಾದ ಕತ್ತಿವರಸೆ , ಕುದುರೆ ಸವಾರಿಯನ್ನು ಸಹಿತ ಕಲಿತಿದ್ದಳಂತೆ. ಬಲ್ಗೇರಿಯಾದಲ್ಲಿ ಮೈನಸ್ ಡಿಗ್ರಿ ವಾತಾವರಣವನ್ನು ಸಹಿತ ಲೆಕ್ಕಿಸದೆ ರಾಜಮೌಳಿ ಅವರನ್ನು ಮೆಚ್ಚಿಸಲು ತಮ್ಮು ಹರಸಾಹಸ ಪಡುತ್ತಿದ್ದಾಳಂತೆ.
 
ಈ ಚಿತ್ರದಲ್ಲಿ ಆವಂತಿಕ ಪಾತ್ರಧಾರಿ ಆಗಿರುವ ತಮನ್ನ ತನ್ನ ಪಾತ್ರಕ್ಕೆಂದು ಸಾಕಷ್ಟು ಕಷ್ಟ ಪಡುತ್ತಿದ್ದಾಳಂತೆ. ಬಾಕ್ಸಾಫೀಸಲ್ಲಿ ಸೋತು ಸೋತು ಹೈರಾಣಾಗಿರುವ ತಮ್ಮುಗೆ ಈಗ ಒಂದು ಕಾಲದ ಶ್ರೀದೇವಿ ಇಂದ್ರಜ ಪಾತ್ರದಂತೆ ಮಾಧ್ಯಮದವರಿಗೆ  ಕಂಡು ಬಂದರೆ ಅದಕ್ಕಿಂತ ನೋವಿನ ಸಂಗತಿ ಮತ್ತೇನಿದೆ. . ಪಾಪ ತಮ್ಮು!

ವೆಬ್ದುನಿಯಾವನ್ನು ಓದಿ