ಮಗಳೊಂದಿಗೆ ಆಗಮಿಸಿ ಗ್ರಹದೋಷ ಪೂಜೆ ಮಾಡಿಸಿದ ಶ್ರೀದೇವಿ

ಶನಿವಾರ, 2 ಮೇ 2015 (10:11 IST)
ಬಾಲಿವುಡ್ ಮಾದಕ ಹಿರಿಯನಟಿ ಶ್ರೀದೇವಿಗೆ ಗ್ರಹ ದೋಷವೇ ಎನ್ನುವ ಪ್ರಶ್ನೆ ಬಹಳ ಮಂದಿಯನ್ನು  ಕಾಡುತ್ತಿದೆ. ಆಕೆಯ ಎರಡನೆಯ ಇನ್ನಿಂಗ್ಸ್ ಈಗ ಆರಂಭವಾಗಿದೆ. ಆದರೆ ಅದು ಆರಂಭವಾದಾಗಿನಿಂದ ಬಂಪರ್ ಅವಕಾಶಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಅಂತಹುದರಲ್ಲಿ ಇದೇನು ಗ್ರಹದೋಷ ಎಂದು ಚಿಂತಿಸುತ್ತಿದ್ದೀರಾ. ಆಕೆ ಗ್ರಹದೋಷದ ಪೂಜೆಗಳನ್ನು ಮಾಡಿಸುತ್ತಿದ್ದಾಳೆ. ಆದರೆ ಯಾವ ಕಾರಣಕ್ಕೆ...?
ಪ್ರಸ್ತುತ ಇದೇ ಸುದ್ದಿ ಹಾಟ್ ಟಾಪಿಕ್ ಆಗಿದ್ದು, ಗ್ರಹಪೀಡೆ ಯಾರಿಂದ, ಯಾಕೆ ಮತ್ತು ಯಾವ ಕಾರಣದಿಂದ ಆಗುತ್ತಿದೆ ಎನ್ನುವ ಚಿಂತೆ ಆಕೆಯ ಅಭಿಮಾನಿಗಳನ್ನು ಬಾಧಿಸುತ್ತಿದೆ. ಏಕೆಂದರೆ ಆಕೆ ಚಿತ್ತೂರು ಜಿಲ್ಲೆಯ ಶ್ರೀ ಕಾಳಹಸ್ತಿಯ ಶಿವನದೇವಾಲಯಕ್ಕೆ ಗುರುವಾರದಂದು ಬಂದು ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ. ಆದರೆ ಆಕೆ ತನ್ನ ಮಗಳ ಜೊತೆ ಬಂದು ಈ ಪೂಜೆಗಳನ್ನು ಮಾಡಿದ್ದಾರೆ ಎನ್ನುವುದು ಹೆಚ್ಚು ಸುದ್ದಿ ಮಾಡಿರುವ ಸಂಗತಿ. ಈಗ ಗ್ರಹಪೀಡೆಯ ಹಾವಳಿ ಕಾಡಿದ್ದು ಯಾರಿಗೆ ಎನ್ನುವ ಅನುಮಾನ ಎನ್ನುವ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. 
 
ಶ್ರೀಕಾಳಹಸ್ತಿಶ್ವರ ದೇವಸ್ಥಾನ ಎಂದೊಡನೆ ರಾಹುಕೇತು ದೋಷ ದೂರ ಮಾಡುವ ಪೂಜೆಗಳಿಗೆ ಪ್ರಸಿದ್ಧವಾಗಿದೆ. ದೇಶ ವಿದೇಶದಿಂದ ಇಲ್ಲಿ ಪೂಜೆ ಮಾಡಿಸಲು ಹಿಂದೂಗಳು ಬಂದು ತಮ್ಮ ಸಮಸ್ಯೆಗೆ ಪರಿಹಾರ ಕಾಣುತ್ತಿದ್ದಾರೆ. ಅದೇರೀತಿ ಸೆಲೆಬ್ರಿಟಿಗಳು ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ, ಅದೇರೀತಿ  ಗುರುವಾರ ಶ್ರೀದೇವಿ ಆ ದೇಗುಲಕ್ಕೆ ಹೋದ ಬಗ್ಗೆ ಸುದ್ದಿ ಇದೆ.  
 
ಆಕೆಯ ಕುಟುಂಬದ ಎಲ್ಲ ಸದಸ್ಯರು ಪೂಜೆಗೆ ಬಂದಿಲ್ಲ. ಕೇವಲ ತಾಯಿ ಮಗಳ ಆಗಮನ ಮಾತ್ರವಾಗಿದ್ದು, ಅವರಿಬ್ಬರೂ ಪೂಜೆ ಮಾಡಿಸಿದ್ದಾರೆ. ಈಗ ಎರಡನೇ ಇನ್ನಿಂಗ್ಸ್ ಚೆನ್ನಾಗಿ ಆರಂಭ ಮಾಡಿಕೊಂಡಿರುವ ಶ್ರೀದೆವಿಗೆ ಯಾವುದೇ ಬಗೆಯ ದೋಷ ಇಲ್ಲದೆ ಇದ್ದರೂ ಇನ್ನು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡದ ಹಾಗೂ ಮಾಡಲು ಸಿದ್ಧವಾಗಿರುವ ಆಕೆಯ ಮಗಳಿಗೆಂದು ಈ ರೀತಿಯ ಪೂಜೆ ಪುನಸ್ಕಾರ ನಡೆದಿರ ಬಹುದೆಂದು ಎಲ್ಲರ ಅನುಮಾನಾ..! ಜೊತೆಗೆ ನಮಗೂ ಸಹಿತ!

ವೆಬ್ದುನಿಯಾವನ್ನು ಓದಿ