ಬಿಜೆಪಿ ಪರ ಮತಯಾಚಿಸಿದ ನಟಿ ಶೃತಿ

ಗುರುವಾರ, 10 ಮೇ 2018 (14:30 IST)
ಬೆಂಗಳೂರು : ಕನ್ನಡದ ನಟಿ ಶೃತಿ ಅವರು ಮಂಡ್ಯದ ಹಾಲಹಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಪ್ರಚಾರ ಮಾಡಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಶೃತಿ ಅವರು,’ ಈ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗೇ ಆಗ್ತಾರೆ, ನೀವೆಲ್ಲರು ಬಿಜೆಪಿ ಬೆಂಬಲಿಸಿ’ ಎಂದು ಹೇಳಿದ್ದಾರೆ. ಹಾಗೇ ‘ಪ್ರಧಾನಿ ಮೋದಿ ಕಾಂಗ್ರೆಸ್‍ನವರಂತೆ ವಂಶಪರಂಪರೆ ರಾಜಕಾರಣ ಮಾಡಿಲ್ಲ. ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಕೇಂದ್ರ ಸರಕಾರದ್ದು, ರಾಜ್ಯ ಸರಕಾರ ಹಣ ನೀಡುತ್ತಿರುವುದು ಕೇವಲ ಗೋಣಿ ಚೀಲ ಮಾತ್ರ ಈ ಯೋಜನೆಗೆ ಅಕ್ಕಿ ಕೋಡುತ್ತಿರುವುದು ಕೇಂದ್ರ ಸರಕಾರ .ಇನ್ನು ರಾಷ್ಟ್ರದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂತಹ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದು ಕೇಂದ್ರ ಸರಕಾರ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ