ಸಿಂಹಾದ್ರಿಯಾಗಿ ವಿಜಯ್ ಮುಂದಿನವಾರ ತೆರೆಯ ಮೇಲೆ ಮನರಂಜಿಸಲು ಬರ್ತಾ ಇದ್ದಾರೆ..

ಶುಕ್ರವಾರ, 26 ಸೆಪ್ಟಂಬರ್ 2014 (09:47 IST)
ಸಿಂಹಾದ್ರಿಯಾಗಿ ವಿಜಯ್ ಮತ್ತು ಸೌಂದರ್ಯ ಜಯಮಾಲ ಜೊತೆ ನಟಿಸಿದ್ದಾರೆ. ಈ ಚಿತ್ರದ  ಟ್ರೇಲರ್  ಮತ್ತು ಧ್ವನಿ ಸುರಳಿ ಎಲ್ಲರ ಗಮನ ಸೆಳೆದಿದೆ. ಇದನ್ನು ಆರ್ ಎಸ್ ಗೌಡ ಅವರು ನಿರ್ಮಿಸಿದ್ದಾರೆ. ಸಿಂಹಾದ್ರಿಯು ಈಗ  ಯು/ಎ ಅರ್ಹತಾ ಪತ್ರವನ್ನು ಪಡೆದಿದೆ.


ಈ ಚಿತ್ರವನ್ನು ಅಕ್ಟೋಬರ್ 2,ಗಾಂಧಿ ಜಯಂತಿಯಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ. ಖ್ಯಾತ  ನಿರ್ದೇಶಕ ಶಿವಮಣಿ  ಸಿಂಹಾದ್ರಿ ಯನ್ನು ನಿರ್ದೇಶಿಸಿದ್ದಾರೆ. ಇದು ಅಣ್ಣತಂಗಿ  ಬಾಂಧವ್ಯದ ಅಂಶಗಳನ್ನು ಒಳಗೊಂಡಿದೆಯಂತೆ. 
 
ತವರಿಗೆ ಬಾ ತಂಗಿ ಯಂತಹ  ಸೂಪರ್ ಹಿಟ್  ಚಿತ್ರ ನೀಡಿರುವ ನಿರ್ಮಾಪಕ ಆದ ಆರ್ ಎಸ್ ಗೌಡ ಅವರು ಮೆಗಾ ಹಿಟ್ ಬ್ಯಾನರ್ ಅಡಿಯಲ್ಲಿ ಸಿಂಹಾದ್ರಿ ಚಿತ್ರ ನಿರ್ಮಾಣ ಮಾಡಿದ್ದಾರೆ.ಸಾಹಸ ಸಿನೆಮಾಗಳ ನಿರ್ದೇಶಕರೆಂದೇ ಮೆಚ್ಚುಗೆ ಗಳಿಸಿರುವ ಶಿವಮಣಿ ಅವರು ಜೋಶ್ ಚಿತ್ರದ  ನಿರ್ದೇಶನದ ನಂತರ ಡೈರೆಕ್ಟ್  ಮಾಡಿರುವ ಚಿತ್ರ ಸಿಂಹಾದ್ರಿ.

ಸಾಹಸಮಯ ಸನ್ನಿವೇಶಗಳು, ಪ್ರೀತಿ,ಕಾಮಿಡಿ,ಮನಮಿಡಿಯುವ ದೃಶ್ಯಗಳು ಈ ಸಿಂಹಾದ್ರಿ  ಒಳಗೊಂಡಿದೆ ಎಂದಿದ್ದಾರೆ ಶಿವಮಣಿ.ಅರ್ಜುನ್ ಜನ್ಯ ಅವರ ಸಂಗೀತ,ಆರ್ ಗಿರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.ವಿಜಯ್,ಸೌಂದರ್ಯ ಅವರೊಂದಿಗೆ ಐಶ್ವರ್ಯ,ಪದ್ಮ ವಾಸಂತಿ, ಸುಚೀಂದ್ರ ಪ್ರಸಾದ್, ರಮೇಶ್ ಭಟ್ ಮುಂತಾದವರು ಅಭಿನಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ