ಎದ್ದೇಳು ಮಂಜುನಾಥ್, ನೀರ್ ದೋಸೆ ಹೀಗೆ ಪಟ್ಟಿಯಲ್ಲಿ ಅನೇಕ ಹೆಸರುಗಳು ಇವೆ. ಆದರೆ ಈಗ ಸಾಫ್ಟ್ ವೇರ್ ಗಂಡ ಸಹಿತ ಅದರಲ್ಲಿ ಸೇರ್ಪಡೆ ಆಗಿದೆ. ಆಗಿದೆ ಎಂದು ಹೇಳುವುದಕ್ಕಿಂತ ಆಗಿತ್ತು ಎಂದರೆ ಹೆಚ್ಚು ಸೂಕ್ತ . ಏಕೆಂದರೆ ಈ ಚಿತ್ರತಂಡದ ಬಗ್ಗೆ ಜಗ್ಗೇಶ್ ಗೆ ಇದ್ದ ಮುನಿಸು ಈಗ ದೂರ ಆಗಿದೆ. ಅವರು ಮತ್ತೆ ನಟಿಸಲು ಬಂದಿದ್ದಾರೆ. ಜಗ್ಗೇಶ್ ಅಭಿನಯದ ಆ ಚಿತ್ರಕೆ ಚಾಲನೆ ಸಿಕ್ಕಿದ್ದು ಚಿತ್ರತಂಡ ಉಸಿರಾಡುವಂತಾಗಿದೆ ನೆಮ್ಮದಿಯಿಂದ !
ಈಗ ಚಿತ್ರದ ಕೆಲಸಗಳು ಆರಂಭವಾಗಿದೆ. ನಿಖಿತ ತುಕ್ರಾಲ್ ಜಗ್ಗೇಶ್ ಜೋಡಿಯಾಗಿದ್ದಾರೆ.ತನಗೆ ಜಗ್ಗೇಶ್ ಜೊತೆಯ ಅಭಿನಯ ಸಕತ್ ಖುಷಿ ಕೊಟ್ಟಿದೆ. ಅದೇರೀತಿ ಹಿರಿಯ ನಟ ಶ್ರೀನಾಥ್ ಅವರ ಜೋಡಿಯಾಗಿ ನಟಿಸಿದ್ದು ಸಹ ಹೆಚ್ಚು ಕಲಿಕೆಗೆ ಸಾಧ್ಯವಾಯ್ತು ಎಂದು ಹೇಳಿದ್ದಾಳೆ ನಿಖಿತ. ವಿ3 ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ರಾಮಪ್ಪ ಮತ್ತು ಸಂಪತ್ ಕುಮಾರ್ ಅವರು ನಿರ್ದೇಶಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಅವಕಾಶ ಪಡೆದುಕೊಂಡು, ಅಂತಿಮ ಘಟದ ತನಕ ಹೋಗಿದ್ದ ನಿಖಿತ ಅಂತಿಮವಾಗಿ ಬಹುಮಾನ ಗೆಲ್ಲದೆ ಹೊರ ಬಂದಿದ್ದಳು. ತನಗೆ ಕನ್ನಡ ಬರದ ಕಾರಣ ಗೆಲ್ಲುವ ಅವಕಾಶ ತಪ್ಪಿತ್ತು ಎಂದು ಆಕೆ ಗೋಳಾಡಿದ್ದಳು ಮಾಧ್ಯಮಗಳ ಮುಂದೆ!!