ಈಗಾಗಲೇ ಬೆಂಗಳೂರಿನ ಕಾಲೇಜೊಂದರಲ್ಲಿ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಸ್ವತಃ ಕವಿರಾಜ್ ಅವರೇ ಬರೆದಿರುವ ಹಾಡಿಗೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಇದೇ ಹಾಡಿನ ಶೂಟಿಂಗ್ ನಡೆಯುತ್ತಿದೆ. ಅಲ್ಲದೇ ಹಾಡಿಗೆ ಮುರಲಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರಂತೆ.
ಇನ್ನು ಸಿನಿಮಾದಲ್ಲಿ ಸೂರಜ್ ಅನ್ನೋ ಹೊಸ ಪ್ರತಿಭೆ ನಾಯಕನಾಗಿ ಕಾಣಿಸಿಕೊಂಡಿದ್ದು, ಆತನಿಗೆ ನಾಯಕಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಈಗ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಕುವ ಚಿತ್ರ ತಂಡ ಇನ್ನೆರಡು ಹಾಡುಗಳ ಶೂಟಿಂಗ್ ಗಾಗಿ ವಿದೇಶಕ್ಕೆ ಹಾರಲಿದೆಯಂತೆ.