'ಕೋಟಿಗೊಬ್ಬ-2'ರಲ್ಲಿ ಕಿಚ್ಚನಿಗೆ ಅವಕಾಶ ನೀಡಿದ ಸೂರಪ್ಪ ಬಾಬು

ಶುಕ್ರವಾರ, 24 ಏಪ್ರಿಲ್ 2015 (10:02 IST)
ನಿರ್ಮಾಪಕ ಸೂರಪ್ಪ ಬಾಬು ಅವರು ತಮ್ಮ ಮುಂದಿನ ಚಿತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೋಟಿಗೊಬ್ಬ ಚಿತ್ರದ ಎರಡನೇ ಭಾಗವನ್ನು ಸೂರಪ್ಪ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲನೆಯ ಭಾಗ ಹದಿನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು. ಕೋಟಿಗೊಬ್ಬ ಮೊದಲ ಅವತರಣಿಕೆಯಲ್ಲಿ ಡಾ. ವಿಷ್ಣುವರ್ಧನ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. 
ಈಗ ಇದರ ಎರಡನೇ ಭಾಗದ ಕೆಲಸಕ್ಕೆ ಜೀವ ಬಂದಿದೆ. ಈ ಪ್ರಾಜಕ್ಟ್ ಬಗ್ಗೆ 2012ರಲ್ಲಿಯೇ ಸುದ್ದಿ ಇದ್ದರೂ ಈಗ ಅದಕ್ಕೆ ಜೀವ ದೊರೆತಿದೆ. ಇದನ್ನು ಕಾಲಿವುಡ್ ಪ್ರಸಿದ್ಧ ನಿರ್ದೇಶಕ ಕೆ ಎಸ್ ರವಿಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 
 
ಸುರೇಶ ಕೃಷ್ಣ ಈ ಚಿತ್ರದ ಕಥೆ ಬರೆದಿದ್ದಾರೆ. ಈ ಚಿತ್ರ ತಮಿಳು ಮೂಲದ ಬಾಷ ಚಿತ್ರದ ರೀಮೇಕ್. ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ನಟಿಸಿದ್ದರು. ಈಗ ಕೋಟಿಗೊಬ್ಬ-2ರಲ್ಲಿ ಕಿಚ್ಚ ಸುದೀಪ್ ಅವಕಾಶ ಗಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ