ಸೈಲೆಂಟ್ ಸುನಿಲ ಚಿತ್ರದೊಂದಿಗೆ ಒಂದಾದ ಸೂರಿ-ಶ್ರೀಧರ್

ಸೋಮವಾರ, 2 ಮಾರ್ಚ್ 2015 (10:05 IST)
ನಿರ್ದೇಶಕ ಸೂರಿ ಹಾಗೂ ಬರಹಗಾರ-ನಿರ್ದೇಶಕ ಅಗ್ನಿ ಶ್ರೀಧರ್ ಅವರು ಒಂದಾಗಿದ್ದಾರೆ. ಅವರಿಬ್ಬರು ಒಂದು ಚಿತ್ರದ ಕೆಲಸ ಆರಂಭಿಸಿದ್ದು, ಚಿತ್ರದ ಕಥೆಯನ್ನು, ಸಂಭಾಷಣೆಯನ್ನು ಒಟ್ಟಿಗೆ ಬರೆಯುತ್ತಿದ್ದಾರೆ ಎಂದು ಈ ಮೊದಲು ನಾವು ತಿಳಿಸಿದ್ದೆವು. ಅವರು ಯಾವ ಭೂಗತ ನಾಯಕನನ್ನು ತೆರೆಗೆ ತರುತ್ತಾರೋ ಎನ್ನುವ ಒಂದು ಮಾತನ್ನು ಸಹಿತ ಹೇಳಿದ್ದೆವು, ಅದು ಈಗ ಸ್ಪಷ್ಟವಾಗಿದೆ, ಬೆಕ್ಕಿನಕಣ್ಣು ರಾಜೇಂದ್ರ ಮರ್ಡರ್ ಕೇಸ್ ಮುಖ್ಯ ಆರೋಪಿ ಆಗಿದ್ದ ಸೈಲೆಂಟ್ ಸುನಿಲ ಚಿತ್ರದ ಕಥೆಯನ್ನು ಸೈಲೆಂಟ್ ಸುನಿಲ ಎನ್ನುವ ಹೆಸರಲ್ಲೇ ತೆರೆ ಕಾಣಿಸುತ್ತಿದ್ದಾರೆ ಸೂರಿ-ಶ್ರೀಧರ್. ಈ ಚಿತ್ರದಲ್ಲಿ ಖುದ್ದು ಸೈಲೆಂಟ್ ಸುನಿಲ ಪಾತ್ರ ಮಾಡುತ್ತಿರುವುದು ಮತ್ತೊಂದು ವಿಶೇಷ. 
ಈಗಾಗಲೇ ಚಿತ್ರದ ಶೂಟಿಂಗ್ ಕೆಲಸಗಳು ಸಾಗುತ್ತಿದೆ, ಸೈಲೆಂಟಾಗಿ, ಸೂರಿ ತುಂಬಾ ಪ್ರೀತಿಯಿಂದ ಕರಾಳ ಬದುಕಿನ ಹಿನ್ನೆಲೆ ಹೊಂದಿರುವ ಸೈಲೆಂಟ್ ಸುನಿಲ ಚಿತ್ರ ಮಾಡುತ್ತಾ ತಮ್ಮ ಭೂಗತ ಪ್ರೀತಿಯನ್ನು ಮತ್ತೆ ತೋರಿದ್ದಾರೆ. ಕಳೆದ ದಶಕದಲ್ಲಿ ಸುನಿಲನ ಬದುಕಿನಲ್ಲಿ ಆದ ಸಂಗತಿಗಳ ಬಗ್ಗೆ ಈ ಚಿತ್ರದಲ್ಲಿ ತೋರುತ್ತಿದ್ದಾರೆ. 
 
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸೈಲೆಂಟ್ ಸುನಿಲ ನಟಿಸಿದರೂ ಸಹಿತ ಉಳಿದ ಪಾತ್ರಗಳು ಇನ್ನು ಆಯ್ಕೆ ಆಗುತ್ತಿದೆ. ಹೊಸಬರಿಗೆ ಅವಕಾಶ ನೀಡಲು ಯೋಚಿಸಿರುವ ಸೂರಿ ತಂಡದಲ್ಲಿನ ಸದಸ್ಯರಾದ  ಟೆಕ್ನಿಕಲ್ ವಿಭಾಗದಲ್ಲಿ ಸತ್ಯ ಹೆಗ್ಡೆ ಕ್ಯಾಮರ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಕಾರ್ಯ ಈ ಚಿತ್ರದಲ್ಲೂ ಮುಂದುವರೆಯಲಿದೆ. 

ವೆಬ್ದುನಿಯಾವನ್ನು ಓದಿ