ಕನ್ನಡ ಚಿತ್ರವನ್ನು ನಿರ್ಮಿಸಲು ಸೌಂದರ್ಯ ರಜನಿಕಾಂತ್ ಆಸಕ್ತಿ ತೋರುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅನೇಕ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈಕೆ ಇತ್ತೀಚಿಗೆ ನಿರ್ದೇಶಕ ಆನಂದ್ ರಾಮ್ ಅವರನ್ನು ಭೇಟಿ ಮಾಡಿದ್ದಾರೆನ್ನುವ ಸಂಗತಿ ಹೊರ ಬಂದಿದೆ. ಆನಂದ ರಾಮ್ ಅವರ ನಿರ್ದೇಶನದ ಇತ್ತೀಚಿನ ಬಿಡುಗಡೆಯ ಚಿತ್ರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ. ಅದು ಈ ವರ್ಷದ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಇದೇ ವರ್ಷದ ಕೊನೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರ ನಿರ್ದೇಶಿಸಲು ಸಜ್ಜಾಗಿರುವ ಆನಂದ್ ರಾಮ್ ಅವರನ್ನು ಸೌಂದರ್ಯ ಭೇಟಿ ಮಾಡಿದ್ದಾರೆ.
ಒಚರ್ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುವುದು. ಈ ಚಿತ್ರ ಇದೆ ವರ್ಷದಲ್ಲಿ ಆರಂಭವಾಗುತ್ತದೆ.ಆದರೆ ಈ ಮೊದಲು ಒಪ್ಪಿಕೊಂಡಿರುವ ಚಿತ್ರ ಪೂರ್ಣವಾದ ಬಳಿಕ ಮುಂದಿನ ಯೋಜನೆಯತ್ತ ಗಮನ ನೀಡುವುದಾಗಿ ಹೇಳಿದ್ದಾರೆ ಆನಂದ್ ರಾಮ್. ಈ ಮೊದಲು ಕೊಚ್ಚಾಡಿಯನ್ ಚಿತ್ರವನ್ನು ನಿರ್ದೇಶಿಸಿದ್ದರು ಸೌಂದರ್ಯ. ಸುಮಾರು 25 ಕೋಟಿಗಳಷ್ಟು ಗಳಿಕೆ ಮಾಡಿರುವ ರಾಮಾಚಾರಿ ಚಿತ್ರದಿಂದ ಈಗ ಆನಂದ್ ರಾಮ್ ಬಹು ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಈಗ ಆ ಯಶಸ್ವಿ ನಿರ್ದೇಶಕ ಸೌಂದರ್ಯ ಕಣ್ಣಿಗೂ ಬಿದ್ದಿದ್ದಾರೆ!