ತುಮಕೂರಿನಲ್ಲಿ ಸುದೀಪ್ ಅಭಿಮಾನಿ ಸಾವು

ಮಂಗಳವಾರ, 7 ಮಾರ್ಚ್ 2017 (08:45 IST)
ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿರುವ ಸಂದರ್ಭದಲ್ಲೇ ಸುದೀಪ್ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. 
 
ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಹೆಬ್ಬುಲಿ ಚಿತ್ರ ವೀಕ್ಷಣೆ ವೇಳೆ ಉಸಿರಾಟದ ಸಮಸ್ಯೆಗೆ ಒಳಗಾಗಿ ಮೃತಪಟ್ಟಿದ್ದಾರೆ. ಹೋಟೆಲ್ ಉದ್ಯಮಿಯಾಗಿರುವ ಶಶಿಧರ್ (45) ಮೃತಪಟ್ಟ ದುರ್ದೈವಿ. ಚಿತ್ರದ ಪ್ರಚಾರಕ್ಕಾಗಿ ಸುದೀಪ್ ಆಗಮಿಸಿದ್ದರು, ಆಗ ತಮ್ಮ ನೆಚ್ಚಿನ ನಟನನ್ನು ಆಲಂಗಿಸಿ ಖುಷಿಪಟ್ಟಿದ್ದರು.
 
ಬಳಿಕ ಚಿತ್ರ ವೀಕ್ಷಣೆ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ತುಮಕೂರಿನ ಕೆ.ಆರ್. ಬಡಾವಣೆಯ ನಿವಾಸಿಯಾಗಿರುವ ಶಶಿಧರ್ ಅವರಿಗೆ ತಾಯಿ, ಪತ್ನಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ