ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Sampriya

ಭಾನುವಾರ, 15 ಜೂನ್ 2025 (17:15 IST)
Photo Courtesy X
ಶಿವಮೊಗ್ಗ: ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿ ನಡೆದ ಅವಘಡ ಸಂಬಂಧ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆದರ್ಶ್‌ ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಚಾಪ್ಟರ್ 1  ಸಿನಿಮಾ ಶೂಟಿಂಗ್‌ ನಡೆಸಲು ಶಿಪ್‌ ಸೆಟ್‌ ನಿರ್ಮಾಣ ಮಾಡಿದ್ದೆವು. ಗಾಳಿ ಮಳೆಯಿಂದ ಸೆಟ್‌ ಮುಗುಚಿ ಹೋಗಿದೆ ಹೊರತು ಕಲಾವಿದರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಈ ಸಂಬಂಧ ಸ್ಪಷ್ಟನೆ ನೀಡಿದೆ. 

ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಶೂಟಿಂಗ್‌ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸೆಟ್ ಹಾಕಿದ ಸ್ಥಳದಿಂದ ನಾವು ತುಂಬಾ ದೂರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯಾರಿಗೂ-ಯಾವುದೇ ಅನಾಹುತವಾಗಿಲ್ಲ. ಸಿನಿಮಾ ತಂಡದವರು ಎಲ್ಲರೂ ಸುರಕ್ಷಿತವಾಗಿದ್ದು,  ಜಲಾಶಯ ಪಕ್ಕದಲ್ಲಿ ಯಾವುದೇ ಚಿತ್ರಿಕರಣ ಮಾಡಿಲ್ಲ ಎಂದು ತಿಳಿಸಿದರು.

ಪೊಲೀಸ್‌ ಇಲಾಖೆ, ಪಂಚಾಯತ್‌, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಶೂಟಿಂಗ್‌ ನಡೆಸಲು ಅನುಮತಿ ಪಡೆಯಲಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ