ಕಿಚ್ಚ ಸುದೀಪ್ ರನ್ನ ಚಿತ್ರದ ಬಿಡುಗಡೆಯ ನಂತರ ನಿರಂತವಾಗಿ ತಮ್ಮನ್ನು ಮೂರು ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿ ನಿರ್ಮಾಪಕರ ಮುಖದಲ್ಲಿ ಸಂತೋಷ ತಂದಿದ್ದಾರೆ. ಸೂರಪ್ಪ ಬಾಬು ಅವರ ನಿರ್ಮಾಣದಲ್ಲಿ ಕೆ ಎಸ್ ರವಿಕುಮಾರ್ ಅವರ ನಿರ್ದೇಶನದಲ್ಲಿ ಸುದೀಪ್ ಅವರು ಕೆಲಸ ಮಾಡುತ್ತಿದ್ದಾರೆ ಅದರ ಜೊತೆ ಈಗ ರಘುನಾಥ್ ಅವರ ನಿರ್ಮಾಣದ ಮಿಲನ ಪ್ರಕಾಶ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಮ್ಮತಿ ಮುದ್ರೆ ಒತ್ತಿದ್ದಾರೆ.
ರನ್ನ ಈವರೆಗೂ ನಾನು ಅಭಿನಯಿಸಿರುವ ಚಿತ್ರಗಳಿಗಿಂತ ಭಿನ್ನವಾಗಿದೆ ಯುವನಟ ತರುಣ್ ಸುಧೀರ್ ಅವರ ಭಾಗವಹಿಸುವಿಕೆ ಮತ್ತು ನಿರ್ದೇಶಕ ನಂದಕಿಶೋರ್ ಅವರ ವರ್ಕ್ ಹಾಲಿಕ್ ಗುಣ ನನ್ನನ್ನು ಸಕತ್ ಇಂಪ್ರೆಸ್ ಮಾಡಿದೆ ಎಂದು ಹೇಳಿದ್ದಾರೆ ಕಿಚ್ಚ.ಅದರ ನಡುವೆ ಜಿಗರ್ ತಂಡ ಎನ್ನುವ ತಮಿಳು ರೀಮೇಕ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಯುವನಟ ರಾಹುಲ್ ಮುಖ್ಯಪಾತ್ರಧಾರಿಯಾಗಿದ್ದಾರೆ.