ರಾಮ್ ಗೋಪಾಲ ವರ್ಮಾ ಮುಂದಿನ ಸಿನಿಮಾದಲ್ಲಿ ಕಿಚ್ಚ

ಮಂಗಳವಾರ, 4 ಆಗಸ್ಟ್ 2015 (10:38 IST)
ರಾಮ್ ಗೋಪಾಲ್ ವರ್ಮಾ ಶಿವಣ್ಣ ನಾಯಕನಾಗಿ ಅಭಿನಯಿಸ್ತಿರೋ ಕಿಲ್ಲಿಂಗ್ ವೀರಪ್ಪನ್ ಬಳಿಕ ಕನ್ನಡದಲ್ಲಿ ಮತ್ತೊಂದು  ಮೆಗಾ ಪ್ರಾಜೆಕ್ಟ್ ಮಾಡೋ ಮೂಡ್ ನಲ್ಲಿದ್ದಾರೆ. ಬೆಂಗಳೂರು ಭೂಗತ ಲೋಕದ ಬಗ್ಗೆ ವರ್ಮಾ ಚಿತ್ರ ಮಾಡೋ ಪ್ಲಾನ್ ನಲ್ಲಿದಾರೆ. ಈ ಚಿತ್ರದಲ್ಲಿ ಮುತ್ತಪ್ಪ ರೈ ಕಥೆ ಇರಲಿದ್ದು ರೈ ಪಾತ್ರವನ್ನ ಕಿಚ್ಚ ಸುದೀಪ್ ಮಾಡ್ತಾರೆ ಅನ್ನೋ ಸುದ್ದಿ ಸದ್ಯ ಗಾಂಧಿನಗರದಲ್ಲಿ  ಹರಿದಾಡ್ತಿದೆ. ಭೂಗತ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಅವರ ನೈಜಕಥೆಯನ್ನ ಸಿಲ್ವರ್ ಸ್ಕ್ರೀನ್ ನಲ್ಲಿ ಅದ್ದೂರಿಯಾಗಿ ತೋರಿಸಲು ವರ್ಮಾ ಹೊರಟಿದ್ದಾರೆ. ಭೂಗತಲೋಕದ ಅನಾವರಣವನ್ನ ಮಾಡಲು ಈಗಾಗ್ಲೇ ಮರ್ಮಾ ಸಾಕಷ್ಟು ತಯಾರಿನಡೆಸ್ತಿದ್ದಾರೆ.
ಇನ್ನು ಸುದೀಪ್ ಗೆ ವರ್ಮಾ ಹೊಸಬರೇನಲ್ಲ. ಅಭಿನಯ ಚಕ್ರವರ್ತಿಯ ಬಗ್ಗೆ ವರ್ಮಾ ಹೊಸದಾಗಿ ತಿಳಿದುಕೊಳ್ಳೋ ಅವಶ್ಯಕತೆಯೂ ಇಲ್ಲ. ಇಬ್ಬರ ಟ್ಯಾಲೆಂಟ್ ಬಗ್ಗೆಯೂ ಒಬ್ಬರಿಗೊಬ್ಬರಿಗೆ ಚೆನ್ನಾಗಿ ಅರಿವಿದೆ. ಈ ಹಿಂದೆ ವರ್ಮಾ ಡೈರೆಕ್ಟ್ ಮಾಡಿದ್ದ  ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಕಿಚ್ಚ  ನಟಿಸಿದ್ರು. ಆ ಸಿನಿಮಾಗಳಲ್ಲೇ ಸುದೀಪ್ ರ ಅಭಿನಯ ಸಾಮರ್ಥ್ಯವನ್ನ ತಿಳಿದಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಸುದೀಪ್ ಗೆ ಪ್ರಮೋಷನ್ ಕೊಟ್ಟಿದ್ದು ಇದೇ ರಾಮ್ ಗೋಪಾಲ್ ವರ್ಮಾ.
 
ಇದೀಗ ಕನ್ನಡದಲ್ಲೇ ಈ ಇಬ್ಬರ ಜೋಡಿಯಲ್ಲಿ ಚಿತ್ರ ಬರುತ್ತಾ ಅನ್ನೋ ಕುತೂಹಲ ಶುರುವಾಗಿದೆ. ಆದ್ರೆ ಈ ಬಗ್ಗೆ ಸುದೀಪ್ ಅವರಾಗ್ಲಿ ವರ್ಮಾ ಅವರಾಗ್ಲಿ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ವರ್ಮಾರ ಈ ಪ್ರಾಜೆಕ್ಟ್ ಸ್ಕ್ರಿಪ್ಟ್ ಹಂತದಲ್ಲಿದೆ. ಒಂದು ವೇಳೆ ಇವರಿಬ್ಬರ ಕಾಂಬಿನೇಷನಲ್ಲಿ ಸಿನಿಮಾವೊಂದು ಬಂದ್ರೆ ಕನ್ನಡಿಗರಿಗೆ ಭರ್ಜರಿ ಮನರಂಜನೆ ಸಿಗೋದ್ರಲ್ಲಿ ಎರಡು ಮಾತಿಲ್ಲ. ಸದ್ಯ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಬ್ಯುಸಿಯಿರೋ ಡೈರೆಕ್ಟರ್ ಯಾವ ನಿರ್ಧಾರ ಕೈಗೊಳ್ತಾರೆ ಕಾದು ನೋಡಬೇಕಿದೆ. 

ವೆಬ್ದುನಿಯಾವನ್ನು ಓದಿ