ದೇಶದಲ್ಲಿ ನಡೆಯುತ್ತಿರೋ ಮಹಿಳೆಯರ ಮೇಲಿನ ದೌರ್ಜನ್ಯದಿಂದಾಗಿ ಇಡೀ ದೇಶವೇ ತಲೆತಗ್ಗಿಸುವಂತಾದೆ. ಈಗ ಇಂತಹ ಘಟನೆಗಳಿಗೆ ಟಿವಿಗಳಲ್ಲಿ ಪ್ರಸಾರವಾಗ್ತಿರೋ ತಾರೆಯರ ಜಾಹೀರಾತುಗಳೇ ಕಾರಣ ಅಂತ ಸಿಪಿಐ ಹಿರಿಯ ನಾಯಕ ಅತುಲ್ ಅಂಜನ್ ಗುಡುಗಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ರೇಪ್ ಕೇಸ್ ಗಳು ಹೆಚ್ಚಾಗಲು ಜಾಹೀರಾತುಗಳು ಅರ್ಧ ಕಾರಣ ಅದ್ರಲ್ಲೂ ಇತ್ತೀಚೆಗೆ ಕಾಂಡೋಮ್ ಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಬಿತ್ತರಿಸುತ್ತಿರುವ ಜಾಹೀರಾತಿನಿಂದ ಇಂತಹ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ ಅಂತ ಅತುಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಹೊಸದೇನಲ್ಲ. ಇದೀಗ ಅತುಲ್ ಈ ರೀತಿಯ ಹೇಳಿಕೆ ನೀಡಿದ್ದು ದೇಶದಾದ್ಯಂತ ವ್ಯಾಪಕ ಚರ್ಚೆಯಾಗ್ತಿದೆ. ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಳ ಕಾಂಡೋಮ್ ಜಾಹೀರಾತಿನಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿದೆ ಎಂದು ಅತುಲ್ ಹೇಳಿಕೆ ನೀಡಿದ್ದಾರೆ. ಜನಪ್ರಿಯ ತಾರೆಯರು ಕಾಂಡೋಮ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡ್ರೆ ಜನರು ತಪ್ಪು ದಾರಿಗಿಳಿಯುತ್ತಾರೆ, ಜೊತೆಗೆ ಈ ಜಾಹೀರಾತು ಅತ್ಯಾಚಾರ ಪ್ರಕರಣಗಳಿಗೂ ದಾರಿ ಮಾಡಿಕೊಡುತ್ತೆ ಎಂದಿದ್ದಾರೆಯ
ಇನ್ನು ನೀಲಿತಾರೆ ಸನ್ನಿ ಲಿಯೋನ್ ವಿರುದ್ಧ ಗರಂ ಆಗಿರೋದು ಇದೇನು ಮೊದಲಲ್ಲ. ಈ ಮೊದಲು ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದಿದ್ರು. ಒಟ್ನಲ್ಲಿ ಇಂತಹ ಹೇಳಿಕೆಗಳಿಂದ ಸನ್ನಿಗೆ ನಷ್ಟವೇನು ಆದಂತೆ ಕಾಣ್ತಿಲ್ಲ. ಇಂತಹ ವ್ಯಾಪಕ ಚರ್ಚೆಗಳಿಂದ ಸನ್ನಿ ಬಾಲಿವುಡ್ ನಲ್ಲಿ ಮತ್ತಷ್ಟು ಹಾಟ್ ಕೇಕ್ ಆಗಿದ್ದಾರೆ.