ರಜನಿಕಾಂತ್ ರಾಜಕೀಯಕ್ಕೆ ಸೇರ್ಪಡೆಯಾಗುವ ಕಾಲ ಕ್ಷಣಗಣನೆ ?

ಶುಕ್ರವಾರ, 17 ಅಕ್ಟೋಬರ್ 2014 (12:16 IST)
ದೈವ ಶಕ್ತಿ ಆದೇಶಿಸಬೇಕು ಎಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹರಡಿರುವ ಸುದ್ದಿಗಳ ಬಗ್ಗೆ  ಪ್ರತಿಕ್ರಿಯಿಸಿ ಹೇಳಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಧ್ಯದಲ್ಲೇ ತನ್ನ ಅಭಿಮಾನಿಗಳ ಜೊತೆ ಒಂದು ರಹಸ್ಯ ಮಾತುಕತೆಗೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಸಂಗತಿ ಕಾಲಿವುಡ್ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿದೆ. 
 
ಅತ್ಯಂತ ಶೀಘ್ರದಲ್ಲೇ ತನ್ನ ಅಭಿಮಾನಿಗಳ ಸಮ್ಮುಖದಲ್ಲಿ ರಾಜಕೀಯ ಕ್ಷೇತ್ರ ವನ್ನು ಪ್ರವೇಶಿಸಲು ಅಗತ್ಯವಾದ ಮುಖ್ಯ ನಿರ್ಣಯವನ್ನು ಅವರು ಕೈಗೊಳ್ಳಲು ಸಿದ್ಧರಾಗಿದ್ದಾರಂತೆ. ಹಾಗೆಂದು ಕಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿ ಹರಡಿವೆ.  
 
ಇಂದು ಸುಪ್ರೀಮ್ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಜಯಾಲಿತಾ ಅವರಿಗೆ ಬೇಲ್ ಸಿಗುತ್ತದೆಯೋ ಇಲ್ಲವೋ ಎನ್ನುವ ಸಂಗತಿಗಿಂತ ರಜನಿಯ ರಾಜಕೀಯ ಪ್ರವೇಶ ಹೆಚ್ಚು ಸುದ್ದಿ ಮಾಡುತ್ತಿದೆ. ಅನೇಕ ವರ್ಷಗಳಿಂದ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿಯು ಹರಡಿತ್ತಾದರೋ ಅದಕ್ಕೆ ಸ್ಪಷ್ಟ ಚಿತ್ರ ಸಿಕ್ಕಿರಲಿಲ್ಲ. 
 
ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ರಜನಿಕಾಂತ್ ತಾನು ದೇವರ ಆಜ್ಞೆಗಾಗಿ ಕಾಯುತ್ತಿದ್ದೇನೆ ಎಂದು ಹೇಳುತ್ತಿದ್ದರು. 
 
ಈ ಹಿನ್ನೆಲೆಯಲ್ಲಿ ನಡೆಯಲು ಸಿದ್ಧವಾಗುತ್ತಿರುವ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರು ರಾಜಕೀಯ ಅನಿಶ್ಚಿತತೆ ಬಗ್ಗೆ ತನ್ನ ಅಭಿಮಾನಿಗಳಿಂದ ವೈಯಕ್ತಿಕ ಅಭಿಪ್ರಾಯ ಪಡೆಯುವತ್ತ ಆದ್ಯತೆ ನೆಟ್ಟಿದ್ದಾರೆ ಎನ್ನುವ ಸುದ್ದಿ ಈಗ ಕಾಲಿವುಡ್ ಮಾಧ್ಯಮಗಳ ಮುಖ್ಯ ಸಂಗತಿಯಾಗಿದೆ.
 
ಆದರೆ ವಿಮರ್ಶಕರ ಪ್ರಕಾರ ರಜನಿ ತನ್ನ ಅಭಿಪ್ರಾಯವನ್ನು ಲಿಂಗಾ ಬಿಡುಗಡೆಯ ಬಳಿಕ ತಿಳಿಸುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ವಿಷಯ ಏನೇ ಇರಲಿ ರಜನಿಕಾಂತ್ ಮತ್ತೊಂದು ಸಂಚಲನಕ್ಕೆ ಸಿದ್ಧ ಆಗಿದ್ದಾರೆ ಎಂದು ಮಾತ್ರ ಹೇಳ ಬಹುದಾಗಿದೆ. 
 
 

ವೆಬ್ದುನಿಯಾವನ್ನು ಓದಿ