ರಶ್ಮಿಕಾ ಮಂದಣ್ಣ ಮೇಲೆ ತಮಿಳು ನಟ ಕಾರ್ತಿ ಬೇಸರ? ಕಾರಣವೇನು ಗೊತ್ತಾ?!

ಬುಧವಾರ, 21 ಆಗಸ್ಟ್ 2019 (09:43 IST)
ಚೆನ್ನೈ: ರಕ್ಷಿತ್ ಶೆಟ್ಟಿ ಜತೆಗೆ ಎಂಗೇಜ್ ಮೆಂಟ್ ಮುರಿದುಕೊಂಡ ಬಳಿಕ ಹಲವಾರು ವಿಚಾರಕ್ಕೆ ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಗುರಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮ ತಮಿಳು ಸಿನಿಮಾ ತಂಡದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.


ನಟ ಕಾರ್ತಿ ಜತೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸುವುದರೊಂದಿಗೆ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿಯಾಗಿತ್ತು. ಈ ಸಿನಿಮಾದ ಹೆಸರು ಸುಲ್ತಾನ್ ಎಂದು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು ಈಗ ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಚಿತ್ರದ ಹೆಸರನ್ನು ವಿಶೇಷವಾಗಿ ಅನೌನ್ಸ್ ಮಾಡಲು ಚಿತ್ರತಂಡ ಉದ್ದೇಶಿಸಿತ್ತು. ಆದರೆ ರಶ್ಮಿಕಾ ಈ ರೀತಿ ತಮ್ಮಷ್ಟಕ್ಕೇ ಹೆಸರು ಬಹಿರಂಗಪಡಿಸಿದ್ದು, ಚಿತ್ರ ತಂಡಕ್ಕೆ ಇಷ್ಟವಾಗಿಲ್ಲ ಎನ್ನಲಾಗಿದೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ರಶ್ಮಿಕಾ ಚಿತ್ರ ತಂಡದ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ