ಟಾಲಿವುಡ್‌ಗೆ ಪ್ರವೇಶಿಸುತ್ತಿರುವ ತಮಿಳು ಹೀರೋ...?!

ಶುಕ್ರವಾರ, 27 ಮಾರ್ಚ್ 2015 (10:02 IST)
ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ತಮಿಳು ಮಾತ್ರವಲ್ಲ ತೆಲುಗು ಪ್ರೇಕ್ಷಕರಿಗೆ ಇಷ್ಟವಾದ ನಟ. ರಜನಿಕಾಂತ್ ಅವರ ಬಳಿಕ ತೆಲುಗು ಚಿತ್ರರಂಗದಲ್ಲಿ ಬೇರೂರಿರುವ ತಮಿಳು ನಟ ಎಂದರೆ ಸೂರ್ಯ ಒಬ್ಬರೇ.ಇಷ್ಟಾದರೂ ತಮಿಳು ಪ್ರೇಕ್ಷಕರು ಆತನನ್ನು ಕೈ ಹಿಡಿಯುತ್ತಿಲ್ಲ. ಈ ಕಾರಣದಿಂದ ಆತ ತೆಲುಗು ಚಿತ್ರರಂಗದ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. ಅಂದರೆ ತೆಲುಗು ನಿರ್ದೇಶಕರಿಂದ ತಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ನಿರ್ದೇಶನ ಮಾಡಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. 
ಈ ಪ್ರಯತ್ನದ ಭಾಗವಾಗಿ ಸೂರ್ಯ ಪೂರಿ ಜಗನ್ನಾಥ್, ವಿನಾಯಕ್ ಅವರುಗಳು ಈಗ ಕಥೆ ಹೇಳಿದ್ದಾರಂತೆ. ಆದರೆ ಆ ಯಾವುದೇ ಕಥೆಗಳು ಸೂರ್ಯಗೆ ಇಷ್ಟ ಆಗಲಿಲ್ಲವಂತೆ. ಈಗ ಬಂದಿರುವ ಹೊಸ ಸಂಗತಿ ಎಂದರೆ ಸೂರ್ಯ ತೆಲುಗಿನಲ್ಲಿ ನಿರ್ದೇಶನ ಮಾಡುತ್ತಿರುವ ಚಿತ್ರವನ್ನು ತ್ರಿವಿಕ್ರಮ  ಶ್ರೀನಿವಾಸ್ ಅವರು ನಿರ್ದೇಶನ ಮಾಡುತ್ತಿದ್ದಾರಂತೆ. ಸನ್ ಆಫ್ ಸತ್ಯ ಮೂರ್ತಿ ಚಿತ್ರ ಬಿಡುಗಡೆಯ ನಂತರ ವಿಕ್ರಮ್ ಅವರು ನಿರ್ದೇಶಿಸುವ ಚಿತ್ರ ಇದೆ ಆಗಿದೆಯಂತೆ. 
 
ಈಗಾಗಲೇ ಈ ಜೋಡಿ ಸಿನಿಮಾ ವಿಷಯಕ್ಕೆ ಸಂಬಂಧ ಪಟ್ಟಂತೆ ಚರ್ಚೆ ಮಾಡಿಕೊಂಡಿದ್ದಾರಂತೆ. ಒಳ್ಳೆಯ ಕಥಾ ಹಂದರ ಹೊಂದಿರುವ ಈ ಚಿತ್ರ ಆಗಿದ್ದರೆ 15 ಕೋಟಿ ರೂಪಾಯಿ ಸಂಭಾವನೆ ನೀಡುವುದಾಗಿ ಸಹ ಸೂರ್ಯ ಆಫರ್ ನೀಡಿದ್ದರಂತೆ. ಸೂರ್ಯ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ಸ್ಟುಡಿಯೋ ಗ್ರೀನ್‌ನಲ್ಲಿ ಈ ಚಿತ್ರದ ನಿರ್ಮಾಣವಾಗುತ್ತಿದೆಯಂತೆ. ತ್ರಿವಿಕ್ರಂ ತನ್ನ ಹೊಸ ಚಿತ್ರಕ್ಕೆಂದು ಪವನ್, ಮಹೇಶ್ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಧ್ಯಕ್ಕೆ ಗುಟ್ಟಿನ ಸಂಗತಿಯಾಗಿದೆ. ಅದು ನಮಗೆ ತಿಳಿದ ತಕ್ಷಣ ನಿಮಗೆ ಗೊತ್ತಾಗೋದೆಷ್ಟು ಹೊತ್ತು?! 

ವೆಬ್ದುನಿಯಾವನ್ನು ಓದಿ