ನಟ ಸುಶಾಂತ ಸಿಂಗ್ ಸಾವಿನ ಕಾರಣ ಗೊತ್ತಾಗಲೇಬೇಕು ಎಂದ ನಟ

ಭಾನುವಾರ, 20 ಸೆಪ್ಟಂಬರ್ 2020 (22:39 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಏನು ಕಾರಣವಾಯಿತು? ಎನ್ನೋದನ್ನು ನಾವು ತಿಳಿದುಕೊಳ್ಳಲೇಬೇಕು.

ನಟ ಸುಶಾಂತ್ ಸಾವಿಗೆ ಏನು ಕಾರಣ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ನಾಗಿನ್ 4 ನಟ ವಿಜಯೇಂದ್ರ ಕುಮೆರಿಯಾ ಹೇಳಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಅನೇಕ ಬೆಳವಣಿಗೆಗಳು ಮತ್ತು ತಿರುವುಗಳನ್ನು ನೋಡಿದ್ದೇವೆ.

ಈ ಮೊದಲು ತನಿಖಾ ಸಂಸ್ಥೆ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರೂ ನಂತರ ಅದು ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣಗಳಿಗೆ ಸ್ಥಳಾಂತರಗೊಂಡಿತು.

ನಟನ ನಿಧನದ ಸುತ್ತಲಿನ ರಹಸ್ಯ ಇನ್ನೂ ಬಗೆಹರಿದಿಲ್ಲ. ತನಿಖೆಯಿಂದ ಸತ್ಯ ಹೊರಬರಲಿ, ನ್ಯಾಯ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ