ತಿಪ್ಪಜ್ಜಿ ಸರ್ಕಲ್ ಥೀಮ್-ಹೆಣ್ಣು ಮಾಯೆಯಲ್ಲ ತಾಯಿ

ಸೋಮವಾರ, 22 ಡಿಸೆಂಬರ್ 2014 (09:32 IST)
ಆದಿತ್ಯ ಚಿಕ್ಕಣ್ಣ ಅವರ ನಿರ್ದೇಶನ ವಿಶಿಷ್ಟ ಚಿತ್ರ ತಿಪ್ಪಜ್ಜಿ ಸರ್ಕಲ್. ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಪೂಜಾ ಗಾಂಧಿ. ದೇವದಾಸಿ ಕಥಾ ಹಂದರ ಹೊಂದಿರುವ, ಅದಕ್ಕಿಂತಲೂ ಹೆಚ್ಚಿನ ಸಂಗತಿ ಎಂದರೆ ಇದು ನೈಜ ಘಟನೆಯನ್ನು ಆಧರಿಸಿವೆ. ಚಿತ್ರದುರ್ಗದಲ್ಲಿ ಬಳ್ಳಿ ಬದುಕಿದ್ದ ಈ ತಿಪ್ಪಜ್ಜಿ ಎನ್ನುವ ದೇವದಾಸಿಯ ಕಥೆಯನ್ನು ಬಿ.ಎಲ್.ವೇಣು ಅವರು ಬರೆದಿದ್ದರು.
ಅದು ಪತ್ರಿಕೆ ಒಂದರಲ್ಲಿ ಪ್ರಕಟವಾಗಿತ್ತು. ಅದನ್ನು ಓದಿದ್ದ ನಿರ್ದೇಶಕರು ಈಗ ಚಿತ್ರ ರೂಪದಲ್ಲಿ ಹೊರ ತರುತ್ತಿದ್ದಾರೆ. ಪೂಜಾ ಅವರ ತಾರ ಬದುಕಿನ ವಿಷಿತ ಪಾತ್ರ ಆಗಿದೆ ಇದು ಎಂದು ಹೇಳ ಬಹುದಾಗಿದೆ.ಹೆಣ್ಣನ್ನು ತಾಯಿ ಎಂದು ಹೇಳುತ್ತಾರೆ ಶರಣರು ಆ ಅಂಶದ ಅಡಿಯಲ್ಲಿ ನಾನು ಈಗ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ ಎಂದು ಹೇಳಿದ್ದಾರೆ ನಿರ್ದೇಶಕರು. ತಿಪ್ಪಜ್ಜಿ ಕಥೆ ಮಹಿಳ ಪರ ಚಿಂತನೆಯತ್ತ ಆದ್ಯತೆ ನೀಡುತ್ತದೆ ಅಷ್ಟೇ ಅಲ್ಲದೆ ಇದರಲ್ಲಿ ಮನೋರಂಜನೆಗೂ ಸಹಿತ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕರು. 
 
ಸುರೇಶ ಶರ್ಮ ಮತ್ತು ಪೂಜಾಗಾಂಧಿ ಅವರ ನಟನೆಯ ಹಲವು ದೃಶ್ಯಗಳು ಮನ ಕಲಕುವಂತಿದೆ ಎಂದು ಹೇಳಿದ್ದಾರೆ ನಿರ್ದೇಶಕರು.ಪಿ ಕೆ ಹೆಚ್ ದಾಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಭರಣಿಶ್ರೀ ಸಂಗೀತವಿದೆ. ಈ ಸಂಗೀತದಲ್ಲಿ ದಾಸರ ಪದಗಳಿಗೂ ಭರಣಿಶ್ರೀ ಆದ್ಯತೆ ನೀಡಿದ್ದಾರೆ. ಅಭಿನೇತ್ರಿ ಇನ್ನು ತೆರೆ ಏರಲು ಸಾಧ್ಯ ಆಗುತ್ತಿಲ್ಲ, ತಿಪ್ಪಜ್ಜಿಯಾದರೂ ಪೂಜಾಗೆ ಜೀವದಾನ ಮಾಡಲಿ ಎನ್ನುವ ಹಾರೈಕೆ ನಮ್ಮದು. 

ವೆಬ್ದುನಿಯಾವನ್ನು ಓದಿ