ಕೆ.ಮಂಜು ಅವರ 'ಪಡ್ಡೆ ಹುಲಿ' ಚಿತ್ರಕ್ಕೆ ಈ ನಟನೇ ಸ್ಪೂರ್ತಿಯಂತೆ!

ಬುಧವಾರ, 14 ಮಾರ್ಚ್ 2018 (06:43 IST)
ಬೆಂಗಳೂರು : ಇತ್ತಿಚೆಗಷ್ಟೇ ‘ಪಡ್ಡೆಹುಲಿ’ ಚಿತ್ರದ ಮುಹೂರ್ತ ಸಮಾರಂಭ ನೆರೆವೇರಿದ್ದು, ಈ ಸಂದರ್ಭದಲ್ಲಿ ಚಿತ್ರಕ್ಕೆ ಕಥೆ ಬರೆದ ನಿರ್ಮಾಪಕ ಕೆ.ಮಂಜು ಅವರು ಈ ಕಥೆ ಬರೆಯಲು ಸ್ಪೂರ್ತಿ ಯಾರೆಂಬುದನ್ನು ತಿಳಿಸಿದ್ದಾರೆ.


ನಿರ್ಮಾಪಕ ಕೆ.ಮಂಜು ಅವರು ‘ಪಡ್ಡೆಹುಲಿ’ ಚಿತ್ರದ ಕಥೆ ಬರೆಯಲು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರೇ ಸ್ಪೂರ್ತಿಯಂತೆ. ಈ ಕುರಿತು ಮಾತನಾಡಿದ ಅವರು,’ ನಾನು ವಿಷ್ಣುವರ್ಧನ್ ಅವರ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ನನಗೆ ತಮ್ಮ ಬಗ್ಗೆ, ತಾವು ಬೆಳೆದು ಬಂದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ತಾವು ಕಷ್ಟಪಟ್ಟ ದಿನಗಳ ಬಗ್ಗೆಯೂ ಹೇಳಿದ್ದಾರೆ. ಅವರಿಂದ ಸ್ಫೂರ್ತಿ ಪಡೆದು, ಕಥೆಯನ್ನು ಬರೆದಿದ್ದೇನೆ' ಎಂದು ಹೇಳಿದ್ದಾರೆ.


ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರು ನಾಯಕನಾಗಿ ನಟಿಸಲಿದ್ದು, ಅವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ