ಏರಿಯಾ ಒಂದರ ಕ್ರಿಕೆಟ್ ಟೀಮ್ ನ ಸುತ್ತ ಹೆಣೆದಿರುವ ಕಥೆಯೊಂದನ್ನು ಆಧರಿಸಿ ಸಿನಿಮಾ ಮಾಡಲಾಗಿದ್ದು, ಸಿನಿಮಾದಲ್ಲಿ ಯುವ ಪ್ರತಿಭೆಗಳ ದಂಡೇ ಇದೆ. ಈಗಾಗಲೇ ಸಿಸಿಎಲ್ ಕ್ರಿಕೆಟ್ ನಲ್ಲಿ ಮಿಂಚಿರುವ ಜಯರಾಮ್ ಕಾರ್ತೀಕ್, ರಾಜೀವ್,ಧ್ರುವ ಹಾಗೇ ಚಿಕ್ಕಣ್ಣ, ಚಂದನ್ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿಸಿಎಲ್ ನಲ್ಲಿದ್ದ ಯುವಕರೇ ಸಿನಿಮಾದಲ್ಲಿರೋದರಿಂದ ಕಿಚ್ಚ ಸುದೀಪ್ ಸಿನಿಮಾ ಇಂಟ್ರೋಡಕ್ಷನ್ ಪಾರ್ಟ್ ಗೆ ತಾವೇ ಧ್ವನಿ ನೀಡಿದ್ದಾರೆ.
ಸಿನಿಮಾವನ್ನು ಕಿರಾತಕ ಸಿನಿಮಾದ ನಿರ್ದೇಶಿಸಿದ್ದ ಪ್ರದೀಪ್ ನಿರ್ದೇಸಿಸಿದ್ದು, ಅರುಣ್ ಆಡ್ಯೂವ್ ಸಂಗೀತ ಸಂಯೋಜಿಸಿದ್ದಾರೆ, ಸಿನಿಮಾದಲ್ಲಿರುವ ರೋಮ್ಯಾಂಟಿಕ್ ಹಾಡು ನನ್ನವಳೇ ಚೆಲುವೆಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ಈ ಹಾಡನ್ನು ಸೋನು ಕೇವಲ ಒಂದೇ ಟೇಕ್ ನಲ್ಲಿ ಹಾಡಿದ್ದಾರಂತೆ. ಈಗಾಗಲೇ ಟ್ರೇಲರ್ ನಿಂದ ಕುತೂಹಲ ಮೂಡಿಸಿರುವ ಈ ಸಿನಿಮಾ ಎಲ್ಲಾ ಅಂದುಕೊಂಡಂತೆ ಆದ್ರೆ ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ.