ದರ್ಶನ್ ಸಂಬಂಧಿ ಎಂದು ಪರಪ್ಪನ ಅಗ್ರಹಾರ ಜೈಲಿಗೆ ಮಾರುವೇಷದಲ್ಲಿ ಬಂದಿದ್ದು ಈ ಸ್ಯಾಂಡಲ್ ವುಡ್ ನಟಿ

Krishnaveni K

ಶನಿವಾರ, 29 ಜೂನ್ 2024 (10:57 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ರನ್ನು ನೋಡಲು ಸಂಬಂಧಿ ಎಂದುಕೊಂಡು ಯುವತಿಯೊಬ್ಬಳು ನಿನ್ನೆ ಜೈಲಿಗೆ ಬಂದಿದ್ದು ಎಲ್ಲರ ಗಮನ ಸೆಳೆದಿತ್ತು. ಈ ಯುವತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನೆಟ್ಟಿಗರಿಗೆ ಅನುಮಾನವೊಂದು ಬಂದಿದೆ.

ಸ್ವತಃ ಕಾರು ಚಲಾಯಿಸಿಕೊಂಡು ಬಂದಿದ್ದ ಯುವತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಮಾಧ್ಯಮಗಳು ಪ್ರಶ್ನಿಸಿದಾಗ ನಾನು ದರ್ಶನ್ ಸಂಬಂಧಿ. ಅವರನ್ನು ನೋಡಲು ಬಂದಿದ್ದೇನೆ. ಆದರೆ ಪೊಲೀಸರು ಬಿಡುತ್ತಿಲ್ಲ ಎಂದಿದ್ದರು. ಈ ಯುವತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ಗಮನಿಸಿದ ನೆಟ್ಟಿಗರು ಈಕೆ ಸ್ಯಾಂಡಲ್ ವುಡ್ ನಟಿ, ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸೋನಲ್ ಮೊಂಟಾರಿಯೊ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಮುಖ ಸೂಕ್ಷ್ಮವಾಗಿ ಗಮನಿಸಿದರೆ ನೆಟ್ಟಿಗರ ಅನುಮಾನ ನಿಜವೆನಿಸುತ್ತಿದೆ.

ಇತ್ತೀಚೆಗೆ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಸೋನಲ್ ದರ್ಶನ್ ಆಪ್ತವಲಯಲದಲ್ಲಿ ಗುರುತಿಸಿಕೊಂಡಿದ್ದರು. ಈ ಕಾರಣಕ್ಕೆ ದರ್ಶನ್ ರನ್ನು ನೋಡಲು, ಮಾಧ್ಯಮಗಳ ಕಣ್ಣಿನಿಂದ ಮರೆ ಮಾಚಲು ಈ ರೀತಿ ಮಾಸ್ಕ್ ಹಾಕಿ ಮುಖಭಾವ ಗುರುತು ಸಿಗದಂತೆ ಜೈಲಿಗೆ ಬಂದಿದ್ದರಾ ಎಂಬ ಅನುಮಾನ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ