ಕೊನೆಗೂ ದರ್ಶನ್ ದರ್ಶನ ಪಡೆಯಲು ಬರಲಿದ್ದಾರೆ ತಾಯಿ ಮೀನಾ, ಸಹೋದರ ದಿನಕರ್

Krishnaveni K

ಗುರುವಾರ, 27 ಜೂನ್ 2024 (11:54 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತಾಯಿ ಮೀನಾ ತೂಗುದೀಪ ಮತ್ತು ಸಹೋದರ ದಿನಕರ್ ತೂಗುದೀಪ ಇಂದು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಜೂನ್ 11 ರಂದು ನಟ ದರ್ಶನ್ ರನ್ನು ಬಂಧನ ಮಾಡಲಾಗಿತ್ತು. ಕಳೆದ ಶನಿವಾರದಿಂದ ದರ್ಶನ್ ಇತರೆ ಆರೋಪಿಗಳ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದುವರೆಗೆ ಅವರ ಕುಟುಂಬದ ವತಿಯಿಂದ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಮಾತ್ರ ಭೇಟಿ ನೀಡಿದ್ದಾರೆ.

ಆದರೆ ಅವರ ಬಂಧನವಾದ ಬಳಿಕ ತಾಯಿ ಮೀನಾ ಜೊತೆಗೆ, ಸಹೋದರ ದಿನಕರ್ ಜೊತೆಗೆ ದರ್ಶನ್ ಗೆ ವೈಮನಸ್ಯವಿತ್ತು ಎಂಬ ವರದಿಗಳಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇದುವರೆಗೆ ಮೀನಾ ಆಗಲೀ, ದಿನಕರ್ ಆಗಲೀ ದರ್ಶನ್ ಭೇಟಿ ಮಾಡಿರಲಿಲ್ಲ. ದರ್ಶನ್ ಪ್ರಕರಣದ ಬಗ್ಗೆ ದಿನಕರ್ ಮಾಧ್ಯಮಗಳೊಂದಿಗೂ ಮಾತನಾಡಿಲ್ಲ.

ಇದೀಗ ಕೊನೆಗೂ ಜೈಲಿನಲ್ಲಿರುವ ದರ್ಶನ್ ರನ್ನು ಭೇಟಿ ಮಾಡಲು ತಾಯಿ ಮೀನಾ ತೂಗುದೀಪ ಮತ್ತು ಸಹೋದರ ದಿನಕರ್ ಬರಲಿದ್ದಾರೆ ಎಂಬ ಸುದ್ದಿಗಳಿವೆ. ಇಂದು ಅಥವಾ ಸದ್ಯದಲ್ಲೇ ದರ್ಶನ್ ರನ್ನು ಮೀನಾ ಮತ್ತು ಸಹೋದರ ದಿನಕರ್ ಭೇಟಿ ಧೈರ್ಯ ತುಂಬುವ ಕೆಲಸ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ