ಈಸೂರಿನಲ್ಲಿ ಒಂದಾಗಲಿದ್ದಾರೆ ತ್ರಿಮೂರ್ತಿಗಳು

ಗುರುವಾರ, 27 ಆಗಸ್ಟ್ 2015 (09:59 IST)
ರಾಜ್ ಫ್ಯಾಮಿಲಿಯ ಮೂರು ಮತ್ತುಗಳು ಗಾಂಧಿನಗರದ ಎವರ್ ಗ್ರೀನ್ ಸ್ಟಾರ್ ಗಳು. ಶಿವಣ್ಣ, ರಾಘಣ್ಣ, ಪುನೀತ್  ಪ್ರತಿಯೊಬ್ಬರು ತಮ್ಮ ಪ್ರತಿಭೆಯಿಂದಲೇ ಕರ್ನಾಟಕದಲ್ಲಿ ತಮ್ಮ ಛಾಪನ್ನ ಒತ್ತಿದ್ದಾರೆ. ಮೂರು ಜನರನ್ನ ಒಂದೇ ಸ್ಕ್ರೀನ್ ನಲ್ಲಿ ನೋಡಬೇಕು ಅನ್ನೋದು ರಾಜ್ ಫ್ಯಾಮಿಲಿ ಅಭಿಮಾನಿಗಳ ಬಹುದಿನಗಳ ಕನಸಾಗಿತ್ತು. ಆಸೆಯಾಗಿತ್ತು. ಕನ್ನಡಿಗರ ಕನಸು ಈಗ ನನಸಾಗೋ ಸುಸಮಯ ಬಂದಿದೆ. ಮೂವರು ಒಂದೇ ಸಿನಿಮಾದಲ್ಲಿ ನಟಿಸೋದಕ್ಕೆ ವೇದಿಕೆ ಸಜ್ಜಾಗ್ತಿದೆ. 
 
ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನ ಒಳಗೊಂಡಿರೋ ಈಸೂರು ಚಿತ್ರದಲ್ಲಿ ಮೂರು ಸ್ಟಾರ್ ಗಳು ನಟಿಸಲಿದ್ದಾರೆ. ಶಿಕಾರಿಪುರದ ಈಸೂರಿನ ಸ್ವಾತಂತ್ರ್ಯ ಸಂಗ್ರಾಮದ ಕಥೆಯೀಗ ಸಿನಿಮಾವಾಗ್ತಿದೆ. ಈ ಸ್ವಾತಂತ್ರ್ಯ ಹೋರಾಟದ ಕಥೆಯುಳ್ಳ  ಈಸೂರು ದಂಗೆ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಮತ್ತು ಪುನೀತ್ ನಟಿಸಲಿದ್ದಾರೆ ಅನ್ನೋದು ಗಾಂಧಿನಗರದ ಲೇಟೆಸ್ಟ್ ಸುದ್ದಿ. ಸ್ವಾತಂತ್ರ್ಯ ಹೋರಾಟಗಾರ ಶಂಕರ್ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡ್ರೆ, ಸೂರಿ ಪಾತ್ರದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. ಇನ್ನು ರಾಘಣ್ಣ ವಿಶೇಷ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ. ಪುನೀತ್ ಈ ಸಿನಿಮಾದ ಕಥೆಯನ್ನ ಸದ್ಯದಲ್ಲೇ ಕೇಳಿ ಫೈನಲ್ ಮಾಡ್ತೀನಿ ಅಂದಿದ್ದಾರೆ.
 
ಇನ್ ವೈಭವ್ ನಿರ್ದೇಶನದ ಈ ಸಿನಿಮಾಗೆ ಎಚ್.ಟಿ ಬಳೆಗಾರ್ ಹಣಹೂಡಲಿದ್ದಾರೆ. ಭಜರಂಗಿ ಮೂವಿಗೆ ಸೆಟ್ ಹಾಕಿದ್ದ ಕಲಾನಿರ್ದೇಶಕರೇ ಈ ಚಿತ್ರಕ್ಕೂ ಸೆಟ್ ಈಸೂರಿನಲ್ಲಿ ಸ್ವಾತಂತ್ರ್ಯ ಪೂರ್ವದ ಸೆಟ್ ಹಾಕಲಿದ್ದಾರೆ. ಈ ಹಿಂದೆ ಕೂಡಾ ಶಿವರಾಜ್ ಕುಮಾರ್ ಸ್ವಾತಂತ್ರ್ಯ ಹೋರಾಟದ ಕಥೆ ಹಗಲುವೇಷದಲ್ಲಿ ನಟಿಸಿದ್ರು.

ವೆಬ್ದುನಿಯಾವನ್ನು ಓದಿ