ಸಿಂಗಾನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್ ಎನ್ನುವ ಹೆಸರಿನ ಕನ್ನಡದ ಕಣ್ಮಣಿ ದಿವಂಗತ ಡಾ. ರಾಜ್ ಕುಮಾರ್, ಸಮಸ್ತ ಕನ್ನಡಿಗರ ಪ್ರೀತಿಯ ಅಣ್ಣಾವ್ರ ಜನ್ಮದಿನ ಇಂದು. ನಟ, ಹಾಡುಗಾರರಾಗಿ ಭಾರತೀಯ ಚಿತ್ರರಂಗ ಹಾಗೂ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದ ಮೇರು ನಟ ಡಾ. ರಾಜ್ ಕುಮಾರ್. ಇಂದು ಅವರ 86ನೇ ಜಯಂತ್ಯೋತ್ಸವ.
ಈ ಚಿತ್ರ ಆಗ 220 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅವರ 71 ನೇ ವಯಸ್ಸಿನಲ್ಲಿ ದಂತಚೋರ ವೀರಪ್ಪನ್ ಅಪಹರಣ ಮಾಡಿ ಸುಮಾರು 108 ದಿನಗಳ ಕಾಲ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಡಾ, ರಾಜ್ ಕುಮಾರ್ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ,ಎನ್ಟಿಆರ್ ನ್ಯಾಷನಲ್ ಅವಾರ್ಡ್, ಮೈಸೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್, ಪದ್ಮಭೂಷಣ ಹಾಗೂ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪುರಸ್ಕಾರವಾದ ದಾದ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಸಹ ಗಳಿಕೆ ಮಾಡಿದ್ದರು. 1995 ರ ತನಕ ಸಿನಿರಂಗದಲ್ಲಿ ಸೇವೆ ಸಲ್ಲಿಸಿದ್ದ ಡಾ. ರಾಜ್ ಕುಮಾರ್ ಅವರು 2006 ರ ಎಪ್ರಿಲ್ 12 ರಂದು ಇಹಲೋಕ ತ್ಯಜಿಸಿದರು.