ಟಾಲಿವುಡ್ ನ ಸ್ಟಾರ್ ನಟ ಹಾಗೂ ನಿರ್ದೇಶಕನ ಮೇಲೆ ಕತೆ ಕದ್ದ ಆರೋಪ

ಶುಕ್ರವಾರ, 28 ಆಗಸ್ಟ್ 2020 (12:35 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಕೊರಟಾಲ ಶಿವ ಮೇಲೆ ಚಿತ್ರ ಲೇಖಕ, ಸಹ ನಿರ್ದೇಶಕ ರಾಜೇಶ್ ಮಂಡೂರಿ ಸಿನಿಮಾ ಕತೆ ಕದ್ದ ಆರೋಪ ಹೊರಿಸಿದ್ದಾರೆ.


ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಸಿನಿಮಾ ಕತೆ  ತಮ್ಮದು, ಈ ಕತೆಯನ್ನು ಮೈತ್ರಿ ಮೂವಿ ಮೇಕರ್ಸ್  ಎಂಬ ನಿರ್ಮಾಣ ಸಂಸ್ಥೆಗೆ ಹೇಳಿದ್ದೆ. ಅವರು ಆ ಕತೆಯನ್ನು ಕೊರಟಾಲ ಶಿವ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದಲ್ಲದೇ ನಿರ್ದೇಶಕರ ಸಂಘ ಹಾಗೂ ಚಿತ್ರಕತೆ ಬರಹಗಾರರ ಸಂಘಕ್ಕೆ ದೂರು ಸಹ ನೀಡಿದ್ದಾರೆ.

ಆದರೆ ನಿರ್ದೇಶಕ ಕೊರಟಾಲ ಶಿವ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ