ಜಗಪತಿ ಬಾಬು ಕೋಟ್ಯಾಧಿಪತಿಯಾಗಲು ಈ ನಟಿಯೇ ಕಾರಣವಂತೆ

ಗುರುವಾರ, 27 ಆಗಸ್ಟ್ 2020 (07:40 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ಖಳನಟ  ಜಗಪತಿ ಬಾಬು ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರ ‘ನಗ್ನಂ’ ಸಿನಿಮಾದ ನಟಿ ಶ್ರೀರಾಪಕಾ ಅಚ್ಚರಿಯ ವಿಚಾರವೊಂದನ್ನು ಹೇಳಿದ್ದಾರೆ.

ಖ್ಯಾತ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರ ಮಗ ಜಗಪತಿ ಬಾಬು ನಟನಾಗಿ ಮಿಂಚಿ ಮರೆಯಾಗಿದ್ದರು. ಬಳಿಕ ಮತ್ತೆ ವಿಲನ್ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು.  ಹೀಗೆ ಜೀವನದಲ್ಲಿ ಅನೇಕ ಏಳು ಬೀಳನ್ನು ಕಂಡ ಈ ನಟ ಇದೀಗ ಕೋಟ್ಯಾಧಿಪತಿಯಾಗಲು ತಾನೇ ಕಾರಣ ಎಂದು  ನಗ್ನಂ’ ಸಿನಿಮಾದ ನಟಿ ಶ್ರೀರಾಪಕಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನನ್ನ ಹೆಸರಿನಲ್ಲಿ ಲಕ್ಷ್ಮೀ ಇದೆ. ನಾನು ಯಾರ ಜೀವನದಲ್ಲಿ ಎಂಟ್ರಿ ಕೊಡ್ತೀನೋ ಅವರನ್ನು ಲಕ್ಷ್ಮೀ ಹುಡುಕೊಂಡು ಬರುತ್ತಾಳೆ. ಆದಕಾರಣ ಮನೆಮಠ ಮಾರಿಕೊಂಡು ಕಷ್ಟದಲ್ಲಿದ್ದ ಜಗಪತಿ ಬಾಬು ನನ್ನ ಪರಿಚಯ ಮಾಡಿಕೊಂಡ ಬಳಿಕ  ಕೋಟ್ಯಾಧಿಪತಿಯಾದರು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ