ಸುನಾಮಿ ಕಿಟ್ಟಿ ಹೀರೋ ಆಗಿ ಸ್ಯಾಂಡಲ್‍ವುಡ್‌ಗೆ ಎಂಟ್ರಿ

ಸೋಮವಾರ, 6 ಮಾರ್ಚ್ 2017 (12:44 IST)
ತಕಧಿಮಿ ತಾ ಡ್ಯಾನ್ಸಿಂಗ್ ಸ್ಟಾರ್ ಹಾಗೂ ಬಿಗ್ ಬಾಸ್‌ನ ಮಾಜಿ ಸ್ಪರ್ಧಿ ಸುನಾಮಿ ಕಿಟ್ಟಿ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸುನಾಮಿ ಕಿಟ್ಟಿ ನಾಯಕತ್ವದ ಚಿತ್ರಕ್ಕೆ ’ಆದಿವಾಸಿ’ ಎಂದು ಹೆಸರಿಡಲಾಗಿದೆ. ಪಿ ಮೂರ್ತಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು.
 
ಈ ಚಿತ್ರಕ್ಕೆ ನಾಯಕಿ ಸಹ ಬಿಗ್ ಬಾಸ್‍ನ ಮತ್ತೊಬ್ಬ ಮಾಜಿ ಸ್ಪರ್ಧಿ ಎಂಬುದು ವಿಶೇಷ. ಜಯಶ್ರೀ ರಾಮಯ್ಯ ಈ ಚಿತ್ರದ ನಾಯಕಿ. ಚಿತ್ರದ ಹೆಸರೇ ಹೇಳುವಂತೆ ನಗರೀಕರಣದಿಂದ ನಶಿಸುತ್ತಿರುವ ಅರಣ್ಯ ಅದರ ರಕ್ಷಣೆ ಕುರಿತ ಕಥೆಯಾಗಿದೆಯಂತೆ. 
 
ಸುನಾಮಿ ಕಿಟ್ಟಿ ಕೂಡ ಅಷ್ಟೇ ಎಚ್ ಡಿ ಕೋಟೆಯ ಅರಣ್ಯ ಪ್ರದೇಶ ಮೂಲದವರು. ಹಾಗಾಗಿ ಈ ಕಥೆ ಅವರಿಗೆ ಒಪ್ಪುವಂತಿದೆ. ರಿಯಾಲಿಟಿ ಸ್ಟಾರ್ ಎಂದೇ ಕರೆಸಿಕೊಂಡಿರುವ ಸುನಾಮಿ ಕಿಟ್ಟಿ ಈಗ ಹೀರೋ ಆಗುತ್ತಿರುವುದು ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ