ಈ ಬಾರಿ ಬರ್ತ್ ಡೇಗೆ ಹಾರ ತುರಾಯಿ ಬಿಟ್ಟು ಗಿಡ ತನ್ನಿ ಎಂದ ರಿಯಲ್ ಸ್ಟಾರ್ ಉಪೇಂದ್ರ

ಸೋಮವಾರ, 16 ಸೆಪ್ಟಂಬರ್ 2019 (09:05 IST)
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರು ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮಾಮೂಲಿನಂತೆ ಕೇಕ್ ಕಟ್ ಮಾಡುವುದು, ಹಾರ ಹಾಕಿಸಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ.


ತಮ್ಮ ನೆಚ್ಚಿನ ನಟನ ಜನ್ಮದಿನದಂದು ಅಭಿಮಾನಿಗಳು ಹಾರ ತುರಾಯಿ ಹಿಡಿದುಕೊಂಡು ಬರುವುದು ಸಾಮಾನ್ಯ. ಆದರೆ ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಇಂತಹ ಆಚರಣೆ ಬೇಡ ಎಂದು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 18 ರಂದು ಉಪೇಂದ್ರ ಜನ್ಮದಿನ. ಈ ದಿನ ಅಭಿಮಾನಿಗಳು ಹಾರ ತರುವ ಬದಲು ಗಿಡ ತನ್ನಿ. ಇದರನ್ನು ಪೋಷಿಸುವ ಜವಾಬ್ಧಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಉಪೇಂದ್ರ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳು ವಿನಾಕಾರಣ ದುಂದು ವೆಚ್ಚ ಮಾಡುವುದು ಬೇಡ ಎಂದು ವಿನಂತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ