ಸ್ಯಾಂಡಲ್ ವುಡ್ ನ ಈ ಖ್ಯಾತ ನಟನ ಜತೆಗೆ ಬ್ರೇಕಪ್ ಮಾಡಿಕೊಂಡಿದ್ದ ನಟಿ ವಿಜಯಲಕ್ಷ್ಮಿ

ಮಂಗಳವಾರ, 28 ಜುಲೈ 2020 (09:13 IST)
ಬೆಂಗಳೂರು: ಕನ್ನಡ, ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಇಂದು ವೈಯಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೂ ಯತ್ನಿಸಿ ಸುದ್ದಿಯಾಗಿದ್ದಾರೆ.


ಕೆಲವು ದಿನಗಳ ಹಿಂದೆ ಆರ್ಥಿಕ ಸಮಸ್ಯೆಯಿಂದಾಗಿ ಚಿತ್ರರಂಗದ ನೆರವು ಕೋರಿದ್ದ ವಿಜಯಲಕ್ಷ್ಮಿ ಈಗ ತಮಿಳು ನಟ, ರಾಜಕಾರಣ ಸೀಮಾನ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ದಾರೆ.

ವಿಜಯಲಕ್ಷ್ಮಿ ಮತ್ತು ವಿವಾದ ಹಿಂದಿನಿಂದಲೂ ಜತೆಯಾಗಿಯೇ ಇದೆ. ಕನ್ನಡದಲ್ಲಿ ಪಾಪ್ಯುಲರ್ ಆಗಿದ್ದಾಗಲೇ ನಟ ಸೃಜನ್ ಲೋಕೇಶ್ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು ವಿಜಯಲಕ್ಷ್ಮಿ. ಆದರೆ ಕಾರಣಾಂತರಗಳಿಂದ ಇಬ್ಬರೂ ಬ್ರೇಕಪ್ ಆಗಿದ್ದರು. ಇದಾದ ಬಳಿಕ ವಿಜಯಲಕ್ಷ್ಮಿ ತಮಿಳಿಗೆ ಹಾರಿದರೆ, ಸೃಜನ್ ಈಗ ತಮ್ಮದೇ ಸಂಸಾರಕಟ್ಟಿಕೊಂಡಿದ್ದಾರೆ. ಇದಾಗಿ ಎಷ್ಟೋ ಸಮಯಗಳ ನಂತರ ಅವರು ತನ್ನ ಆರ್ಥಿಕ ಸ್ಥಿತಿಯನ್ನು ಹೇಳಿಕೊಂಡು ಎಲ್ಲರ ಮನಕರಗುವಂತೆ ಮಾಡಿದರು.

ಆಗ ಕಿಚ್ಚ ಸುದೀಪ್ ಸೇರಿದಂತೆ ಕೆಲವಾರು ಜನ ಸಹಾಯ ಮಾಡಿದರು. ಆದರೆ ಆಗಲೂ ಅವರು ಸುಧಾರಿಸಲಿಲ್ಲ. ಇದೀಗ ಆತ್ಮಹತ್ಯೆ ಯತ್ನದ ಮೂಲಕ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ