ವಾಣಿಜ್ಯಿಕ ನಗರದ ಹರಟೆ ಕಟ್ಟೆಯಲ್ಲಿ ವಿನಯ್ ರಾಜ್‌ಕುಮಾರ್-ಅಪೂರ್ವ

ಶನಿವಾರ, 23 ಮೇ 2015 (10:12 IST)
ವಿನಯ್ ರಾಜ್ ಕುಮಾರ್ ಬಗ್ಗೆ ಸದಾ ಮಾಧ್ಯಮಗಳಿಗೆ ಗಮನ ಇದ್ದೇ ಇರುತ್ತದೆ. ಆ ಯುವನಟನ ಬಗ್ಗೆ ಅಷ್ಟೊಂದು ಆಸಕ್ತಿ ಇರಲು ಮುಖ್ಯಕಾರಣ ಆತ ರಾಜ್ ಕುಮಾರ್ ಕುಟುಂಬದ ಸದಸ್ಯ ಎಂದು ಬಿಡಿಸಿ   ಹೇಳಬೇಕಿಲ್ಲ. ಈ ಯುವನಟನ ಮೊಟ್ಟಮೊದಲ ಚಿತ್ರ ಕಳೆದ ವರ್ಷ ಬಿಡುಗಡೆ ಆಯ್ತು. ಚಿತ್ರವೂ ಆತ ಒಬ್ಬ ಉತ್ತಮ ಕಲಾವಿದ ಎನ್ನುವುದನ್ನು ನಿರೂಪಿಸಿ ಉತ್ತಮ ಗಳಿಕೆ ಮಾಡಿತು. ಈಗ ಜೋಗಿ ಪ್ರೇಂ ಅವರ ನಿರ್ದೇಶನದಲ್ಲಿ ಎರಡನೇ ಚಿತ್ರ ನಟಿಸಲು ಸಿದ್ಧವಾಗಿದ್ದಾರೆ. ಸಿದ್ಧಾರ್ಥ  ಅವರ ಮೊದಲ ಚಿತ್ರವಾಗಿತ್ತು. ಅದರಲ್ಲಿ ಮುಂಬೈ ಮೂಲದ  ಅಪೂರ್ವ ಅರೋರ ಎನ್ನುವ ಮಾಡೆಲ್ ಕಂ ನಟಿ ಅಭಿನಯಿಸಿದ್ದರು. ಸಿದ್ಧಾರ್ಥ ಆಕೆಯ ಚೊಚ್ಚಲ ಕನ್ನಡ ಚಿತ್ರವಾಗಿತ್ತು. ಈ ಯಶಸ್ವಿ ಜೋಡಿ ಇತ್ತೀಚೆಗೆ ಮುಂಬೈನಲ್ಲಿ ಸ್ವಲ್ಪ  ಸಮಯ ಕಳೆದರು. ಈ ಇಬ್ಬರು ಸ್ನೇಹಿತರು ಖುಷಿಯಾ ಓಡಾಡಿ ಸಮಯ ಕಳೆದ ಬಗ್ಗೆ ಅಪೂರ್ವ ಟ್ವೀಟಿಸಿ ಹೇಳಿದ್ದಾರೆ.
ತಮ್ಮ ಮುಂದಿನ ಚಿತ್ರದ ಅಭಿನಯಕ್ಕೆಂದು  ನಟನೆ ಹಾಗೂ ಸಾಹಸ ಸ್ಕಿಲ್ ಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆಯುತ್ತಿರುವ ವಿನಯ್ ಅವರು ಅಪೂರ್ವ ಅವರನ್ನು ಭೇಟಿ ಮಾಡಿ ಸ್ವಲ್ಪ ಕಾಲ ಅವರೊಂದಿಗೆ ವಿನಿಯೋಗಿಸಿದರಂತೆ. ಈ ಬಗ್ಗೆ ಆಕೆ ಉಲ್ಲಾಸ ಹಾಗೂ ಉತ್ಸಾಹದಿಂದ ಹೇಳಿಕೊಂಡಿದ್ದಾರೆ. ಗೆಳೆಯನ ಜೊತೆ ಮಾತಾಡಿದ್ದೆ ಮಾತಾಡಿದ್ದು. ಸಕತ್ತಾಗಿತ್ತು ಹರಟೆ ಎಂದು ಸಹಿತ ಆಕೆ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ