ವದಂತಿಗಳಿಗೆ ಕಿವಿ ಕೊಡದಿರಿ ನಾವಿಬ್ಬರು ಫ್ರೆಂಡ್ಸ್

ಬುಧವಾರ, 17 ಡಿಸೆಂಬರ್ 2014 (10:28 IST)
ಕಳೆದತಿಂಗಳು ಗಾಂಧೀ ನಗರವಾಸಿಗಳ ಮಾತಲ್ಲಿ ಹೆಚ್ಚು ಹರಡಿದ್ದು ಮತ್ತು ಹಬ್ಬಿದ್ದು ಒಂದೇ ಸಂಗತಿ. ಆ ಸಂಗತಿ ಅದೆಷ್ಟರ ಮಟ್ಟಿಗೆ ಪ್ರಭಾವ ತೋರಿತ್ತು ಎಂದರೆ ಯಾಕೆ ಮತ್ತೆ ಏನಾಯ್ತು ಎಂದು ಕೇಳುವ ಮಂದಿ ಒಂದುಕಡೆ ಇದ್ದರೆ, ಮತ್ತೊಂದು ಕಡೆ ಇಲ್ಲ ಹಾಗೆ ಆಗಿರಲಿಕ್ಕಿಲ್ಲ ಹಾಗೂ ಇನ್ನು ಒಂದು ಗುಂಪು ತಟಸ್ತವಾಗಿ ಎಲ್ಲವನ್ನು ಗಮಸಿಕೊಂಡಿತ್ತು. ಈ ಎಲ್ಲ ಸಂಗತಿಗಳು ಸ್ಯಾಂಡಲ್ ವುಡ್ ಸ್ನೇಹಿತರಾದ ಸುದೀಪ್ ಮತ್ತು ದರ್ಶನ್ ಕಡೆಗೆ ಬಂದು ನಿಲ್ಲುತ್ತಿತ್ತು. ಅವರಿಬ್ಬರ ಸ್ನೇಹ ಒಡೆದಿದೆ, ಆ ಜೋಡಿ ಬೇರೆಬೇರೆ ಆಗಿದ್ದಾರೆ ಎನ್ನುವುದೇ ಅದರ ಮುಖ್ಯಸಾರವಾಗಿತ್ತು ಎಂದೇ ಹೇಳ ಬಹುದಾಗಿದೆ. 
ಆದರೆ ಆ ತಾರೆಯರು ಹೀಗೆ ಹರಡಿದ್ದ ಸುದ್ದಿಗಳನ್ನು ತಿರಸ್ಕರಿಸುತ್ತ ಸತ್ಯವನ್ನು ಟ್ವೀಟಿಸಿ ಹೇಳಿದ್ದರು. ನಮ್ ಸ್ನೇಹ ಸ್ಟ್ರಾಂಗು ಗುರು ಸ್ಟ್ರಾಂಗು ಗುರು ಅಂತ! ವಿಶೇಷ ಅಂದರೆ ಆ ಗೆಳೆಯರು ಭೇಟಿ ಆಗಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಕಳೆದ ಭಾನುವಾರ ಮತ್ತೆ ಈಗ ಜೋಡಿ ಒಂದೇ ವೇದಿಕೆ ಹಂಚಿಕೊಳ್ಳ ಬೇಕಿತ್ತು. ಸೆಲೆಬ್ರಿಟಿ  ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ಇವರ ಭೇಟಿಯ ವೇದಿಕೆ ನಿರ್ಮಿಸಿತ್ತು. ಆದರೆ ಸುದೀಪ್ ಅವರು ಹೊರ ಬಳಿಕ ದರ್ಶನ್ ಬಂದರು. ಆದರೆ ಈ ಜೋಡಿ ವೇದಿಕೆಯ ಹೊರಗೆ ಭೇಟಿ ಆದರು ಎನ್ನುವ ಸುದ್ದಿ ಇದೆ. 

ವೆಬ್ದುನಿಯಾವನ್ನು ಓದಿ