ಕಳೆದ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದರು.ನಾವು ನಟರು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಅನಗತ್ಯವಾದ ಜಗಳ ಕದನದ ಟ್ವೀಟ್ ಮಾಡುತ್ತಾ ಕಾಲಹರಣ ಮಾಡಬೇಡಿ. ಸಣ್ಣ ಸಂಗತಿಯನ್ನು ದೊಡ್ಡದು ಮಾಡಬೇಡಿ, ನಿಮ್ಮ ಬಳಿ ರಿಕ್ವೆಸ್ಟ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡುವುದರ ಮೂಲಕ ಹೇಳಿದ್ದರು. ಆ ಮಾತಿಗೆ ನವರಸ ನಾಯಕ ಜಗ್ಗೇಶ್ ಸಹಿತ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಸಾಮಾಜಿಕ ಸ್ಥಳಗಳಲ್ಲಿ ಅಭಿಮಾನಿಗಳು ಜಗಳ ಆಡದಿರಿ . ನಾವು ಒಬ್ಬರಿಗೊಬ್ಬರು ಗೌರವ ಕೊಡ್ತೀವಿ. ನಮ್ಮಲ್ಲಿ ವೃತ್ತಿಪರ ಸ್ಪರ್ಧೆ ಇರುತ್ತದೆಯೇ ವಿನಃ ಮತ್ಯಾವುದೇ ರೀತಿಯ ವೈಮನಸ್ಯ ಇರುವುದಿಲ್ಲ. ಈ ಕಾರಣವನ್ನು ಮುಂದಿಟ್ಟುಕೊಂಡು ನೀವು ಜಗಳಕ್ಕೆ ಆಸ್ಪದ ನೀಡದಿರಿ. ನನ್ನ ಭಾವನೆಗಳಿ ಪ್ರತಿಕ್ರಿಯೆ ತೋರಿದ ಎಲ್ಲರಿಗೂ ಧನ್ಯವಾದಗಳು, ಸಾಮಾಜಿಕ ಫಾರ್ಮ್ ಗಳಲ್ಲಿ ಪದಗಳ ಬಳಕೆಯ ಬಗ್ಗೆ ಗಮನ ನೀಡುತ್ತೀರೆಂದು ನಂಬಿದ್ದೇನೆ.ಕಲಾವಿದರ ವದನದಲ್ಲಿ ನಗೆಯನ್ನು ತರಿಸುವ ಕೆಲಸ ಮಾಡುತ್ತೀರೆಂದು ಆಶಿಸುತ್ತೇನೆ ಎಂದು ಟ್ವೀಟಿಸಿ ಹೇಳಿದ್ದಾರೆ.