ಪವಿತ್ರಾ ಭೇಟಿಗೆ ಬಂದ ಸಹೋದರ ಬ್ಯಾಗ್‌ನಲ್ಲಿ ತಂದಿದ್ಧೇನು

Sampriya

ಮಂಗಳವಾರ, 25 ಜೂನ್ 2024 (19:53 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪವಿತ್ರಾ ಗೌಡರನ್ನು ಸಹೋದರ ಭೇಟಿಯಾಗಿದ್ದಾರೆ.

ಇನ್ನೂ ಭೇಟಿಗೆ ಬಂದ ಸಹೋದರ ಕಪ್ಪು ಬ್ಯಾಗ್‌ನಲ್ಲಿ ಪವಿತ್ರಾಗೆ ಬೇಕಾದ ವಸ್ತುಗಳನ್ನು ತಂದುಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.

ದರ್ಶನ್ ಆಪ್ತೆಯಾಗಿರುವ ಪವಿತ್ರಾ ಗೌಡ ಮಾಡೆಲ್ ಆಗಿ, ನಟಿಯಾಗಿ ಅಭಿನಯಿಸಿದ್ದಾರೆ. ಅದಲ್ಲದೆ ಬ್ಯುಟಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದ ಪವಿತ್ರಾ ಆಗಾಗ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

ಇನ್ನೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ದಿನೇ ದಿನೇ ಸೊರಗು ಹೋಗುತ್ತಿದ್ದಾರೆಂಬ ಮಾಹಿತಿಯಿದೆ. ಜೈಲಿನ ಜೀವನ ಶೈಲಿಗೆ ಸೆಟ್ ಆಗದೆ ಪವಿತ್ರಾ ಕಣ್ಣೀರು ಹಾಕುತ್ತಿರುವುದು ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಪವಿತ್ರಾ ಜೈಲು ಸೇರುತ್ತಿದ್ದ ಹಾಗೇ ಆಕೆಯ ಪೋಷಕರು ಭೇಟಿಗೆ ಬಂದಿದ್ದು, ಈ ವೇಳೆಯೂ ಕಣ್ಣೀರು ಹಾಕಿದ್ದರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ