ಮೈಸೂರು ಯುವ ದಸರಾದಲ್ಲಿ ಡಿ ಬಾಸ್ ಹೆಸರು ಕೂಗಿದ್ದಕ್ಕೆ ಶ್ರೀಮುರಳಿ ಏನು ಹೇಳಿದ್ರು ನೋಡಿ

Krishnaveni K

ಬುಧವಾರ, 25 ಸೆಪ್ಟಂಬರ್ 2024 (10:59 IST)
Photo Credit: Facebook
ಮೈಸೂರು: ಯುವ ದಸರಾ ವೇದಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಮಾತನಾಡುತ್ತಿರುವಾಗ ಡಿ ಬಾಸ್ ಎಂಬ ಕೂಗು ಕೇಳಿಬಂದಿದೆ. ಇದಕ್ಕೆ ಅವರ ಪ್ರತಿಕ್ರಿಯೆ ಹೇಗಿತ್ತು ಎಂದು ಇಲ್ಲಿ ನೋಡಿ.

ರೋರಿಂಗ್ ಸ್ಟಾರ್ ಶ್ರೀಮುರಳಿ ಯುವ ದಸರಾ ವೇದಿಕೆಗೆ ಬಂದಿದ್ದರು. ಅವರ ಜೊತೆಗೆ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬೆಡಗಿ ರುಕ್ಮಿಣಿ ವಸಂತ್ ಕೂಡಾ ಇದ್ದರು. ಇಬ್ಬರೂ ನಿನ್ನೆ ಸಂಜೆ ಯುವ ದಸರಾ ವೇದಿಕೆಯಲ್ಲಿ ನೆರೆದಿದ್ದ ವೀಕ್ಷಕರನ್ನು ರಂಜಿಸಿದರು. ರೋರಿಂಗ್ ಸ್ಟಾರ್ ಶ್ರಿಮುರಳಿ ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದರು.

ಶ್ರೀಮುರಳಿ ವೇದಿಕೆಯಲ್ಲಿ ಮಾತನಾಡುತ್ತಿರುವಾಗ ಪ್ರೇಕ್ಷಕರ ಗುಂಪೊಂದು ಡಿ ಬಾಸ್ ಡಿಬಾಸ್ ಎಂದು ಕೂಗುತ್ತಿತ್ತು. ಅವರ ಘೋಷಣೆ ಕೇಳಿಸಿಕೊಂಡ ಶ್ರೀಮುರಳಿ, ‘ಆಯ್ತು ಚಿನ್ನ.. ಒಳ್ಳೆಯದಾಗಲಿ ಚಿನ್ನಾ.. ಎಲ್ಲರಿಗೂ ಒಳ್ಳೆಯದಾಗುತ್ತೆ ಚಿನ್ನಾ.. ಕಾಲಾಯ ತಸ್ಮೈ ನಮಃ ಅಷ್ಟು ಮಾತ್ರ ಹೇಳ್ತೀನಿ. ಯಾರ ಬಗ್ಗೆ ಏನೂ ಹೇಳೋದು ಬೇಡ. ಅವನೊಬ್ಬ ಮೇಲೆ ಇದ್ದಾನೆ. ಎಲ್ಲಾ ನೋಡ್ಕೊಳ್ತಾನೆ, ಎಲ್ಲರಿಗೂ ಒಳ್ಳೆಯದು ಮಾಡ್ತಾನೆ. ನನಗೂ ಬಹಳ ಇಷ್ಟ, ನಿಮಗೂ ಬಹಳ ಇಷ್ಟ. ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯದಾಗುತ್ತೆ ಅಂತ ಮಾತ್ರ ಹೇಳ್ತೀನಿ ಚಿನ್ನಾ..’ ಎಂದು ಶ್ರೀಮುರಳಿ ಹೇಳಿದರು.

ನಟ ದರ್ಶನ್ ಹೆಸರೆತ್ತದೇ ಶ್ರೀಮುರಳಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾಗ ನೆರೆದಿದ್ದ ಡಿ ಬಾಸ್ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಗ್ಗೆ ಎಲ್ಲೇ ಹೋದರೂ ಅವರ ಅಭಿಮಾನಿಗಳು ಪ್ರಸ್ತಾಪಿಸುತ್ತಲೇ ಇರುತ್ತಾರೆ.

ನೆನ್ನೆ ನಡೆದ ಯುವದಸರಾ ಕಾರ್ಯಕ್ರಮದಲ್ಲಿ ಡಿಬಾಸ್ ಅಭಿಮಾನಿಗಳ ಕೂಗಿಗೆ ಡಿಬಾಸ್ ಅವರ ಬಗ್ಗೆ ನಟ @SRIMURALIII ಅವ್ರ ಮಾತು..❤

ಕಾಲಾಯ ತಸ್ಮೈ ನಮಃ...????#DBoss???? | @dasadarshan ????#DBoss | #BossOfSandalwood | #Darshanpic.twitter.com/W80ONEy2zq

— ಕರುನಾಡ ಅಧಿಪತಿ???? (@bhupathi07999) September 25, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ