ನಟ ಧನಂಜಯ್ ಈ ಬಾರಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವೆಂದು ಹೇಳಿದ್ಯಾಕೆ?

ಬುಧವಾರ, 22 ಆಗಸ್ಟ್ 2018 (07:09 IST)
ಬೆಂಗಳೂರು : ಆಗಸ್ಟ್  23ರಂದು ನಟ ಧನಂಜಯ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಅಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರಂತೆ.


ಆಗಸ್ಟ್  23ರಂದು ನಟ ಧನಂಜಯ್ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಅಭಿಮಾನಿಗಳೆಲ್ಲಾ ಸಿದ್ಧತೆ ಮಾಡಿಕೊಂಡಿದ್ದರೆ ನಟ ಧನಂಜಯ್ ಮಾತ್ರ ಈ ಸಂಭ್ರಮ ಬೇಡವೆಂದು ಹೇಳಿದ್ದಾರೆ. ಈ ವಿಷಯವನ್ನು ಧನಂಜಯ್ ಅವರು ವಿಡಿಯೋ ಮೂಲಕ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.


ಹೌದು. ಕೊಡಗು ಜಿಲ್ಲೆಯಲ್ಲಿ ಉಂಟಾದ ಭಾರಿ ಅನಾಹುತದಿಂದ ಅಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಿನವರ ಬದುಕು ಬೀದಿಗೆ ಬಂದಿದೆ. ಇಂತಹ ಸಮಯದಲ್ಲಿ ನಾನು ಸಂಭ್ರಮಿಸುವುದು ಸರಿಯಲ್ಲ ಎಂದು ಯೋಚಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಿರಲು ನಟ ಧನಂಜಯ್ ನಿರ್ಧರಿಸಿದ್ದಾರೆ. ಹಾಗೇ ಅಭಿಮಾನಿಗಳು ನಿರಾಸೆ ಪಡುವ ಅಗತ್ಯವಿಲ್ಲ.


ಆ ದಿನ ನಿಮ್ಮನ್ನು ಭೇಟಿ ಮಾಡುತ್ತೇನೆ. ಯಾವುದೇ ಕೇಕ್, ಪಟಾಕಿ, ಕಟೌಟ್ ಗಳನ್ನ ಹಾಕುವುದು ಬೇಡ. ಕೊಡಗು ಜನರ ಕ್ಷೇಮಾಭಿವೃದ್ಧಿಗಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಆ ದಿನ ಅವರಿಗೆ ನೆರವಾಗೋಣ. 10 ರೂಪಾಯಿನೋ, 20 ರೂಪಾಯಿನೋ, ಎಷ್ಟು ಆಗುತ್ತೋ ಅಷ್ಟು ಕೊಡಿ. ನಾವು ಕೊಡಗಿನ ಜನತೆಗೆ ನೆರವಾಗೋಣಾ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ